ADVERTISEMENT

ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿಗೆ ‘ಸರ್ವೆ ನಂಬರ್‌ 97’ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 20:21 IST
Last Updated 28 ಮೇ 2025, 20:21 IST
ಅನಿಲ್‌ ಗುನ್ನಾಪೂರ
ಅನಿಲ್‌ ಗುನ್ನಾಪೂರ   

ಮಂಡ್ಯ: ‘ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿ–2024’ಕ್ಕೆ ಯುವ ಕಥೆಗಾರ ಅನಿಲ್‌ ಗುನ್ನಾಪೂರ ಅವರ ‘ಸರ್ವೆ ನಂಬರ್‌ 97’ ಕಥಾ ಸಂಕಲನ ಆಯ್ಕೆಯಾಗಿದೆ.

ಪ್ರಶಸ್ತಿಯು ₹25 ಸಾವಿರ ನಗದು ಬಹುಮಾನ, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಜೂನ್‌ ಮೂರನೇ ವಾರದಲ್ಲಿ ಮಂಡ್ಯದಲ್ಲಿ ಪ್ರದಾನ ಮಾಡಲಾಗುವುದು. ಸ್ಪರ್ಧೆಗೆ ಒಟ್ಟು 48 ಕೃತಿಗಳು ಬಂದಿದ್ದವು. ಗೀತಾ ವಸಂತ, ಅಶೋಕ್‌ಕುಮಾರ್‌ ರಂಜರೆ ಮತ್ತು ಕೆ.ಪುಟ್ಟಸ್ವಾಮಿ ತೀರ್ಪುಗಾರರ ಸಮಿತಿಯು ಈ ಕೃತಿಯನ್ನು ಆಯ್ಕೆ ಮಾಡಿದೆ ಎಂದು ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಎಚ್‌.ಆರ್‌. ಸುಜಾತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT