ADVERTISEMENT

ಕಾಲೇಜು ಬಾಗಿಲು, ಕುರ್ಚಿಗೆ ಹಾನಿ

ಮದ್ದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದುಷ್ಕರ್ಮಿಗಳಿಂದ ಕೃತ್ಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 17:00 IST
Last Updated 9 ಜನವರಿ 2021, 17:00 IST
ಮದ್ದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರವೇಶಿಸಿರುವ ದುಷ್ಕರ್ಮಿಗಳು ಕಾಲೇಜಿನ ಕೊಠಡಿಗಳ ಬಾಗಿಲನ್ನು ಒಡೆದು, ಕಿಟಕಿ, ಕುರ್ಚಿಗಳಿಗೆ ಹಾನಿ ಮಾಡಿದ್ದಾರೆ (ಎಡ ಚಿತ್ರ). ಕಾಲೇಜಿನ ಮೆಟ್ಟಿಲುಗಳ ಮೇಲೆ ಮದ್ಯದ ಬಾಟಲಿಗಳನ್ನು ದುಷ್ಕರ್ಮಿಗಳು ಒಡೆದುಹಾಕಿದ್ದಾರೆ
ಮದ್ದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರವೇಶಿಸಿರುವ ದುಷ್ಕರ್ಮಿಗಳು ಕಾಲೇಜಿನ ಕೊಠಡಿಗಳ ಬಾಗಿಲನ್ನು ಒಡೆದು, ಕಿಟಕಿ, ಕುರ್ಚಿಗಳಿಗೆ ಹಾನಿ ಮಾಡಿದ್ದಾರೆ (ಎಡ ಚಿತ್ರ). ಕಾಲೇಜಿನ ಮೆಟ್ಟಿಲುಗಳ ಮೇಲೆ ಮದ್ಯದ ಬಾಟಲಿಗಳನ್ನು ದುಷ್ಕರ್ಮಿಗಳು ಒಡೆದುಹಾಕಿದ್ದಾರೆ   

ಮದ್ದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದ ಕಾಂಪೌಂಡ್ ಹಾರಿ ತಡ ರಾತ್ರಿ ಪ್ರವೇಶಿಸಿರುವ ದುಷ್ಕರ್ಮಿಗಳು ಕಾಲೇಜಿನ ಕೊಠಡಿಗಳ ಬಾಗಿಲನ್ನು ಒಡೆದು, ಕಿಟಕಿ, ಕುರ್ಚಿಗಳಿಗೆ ಹಾನಿ ಮಾಡಿದ್ದಾರೆ.

ಕೆಲ ತಿಂಗಳ ಹಿಂದೆ ಇದೇ ರೀತಿ ಕಿಡಿಗೇಡಿಗಳು ದಾಂದಲೆ ನಡೆಸಿದ್ದರು. ಕಾಲೇಜಿನ ಕಟ್ಟಡದ ಲ್ಲಿರುವ ವಿದ್ಯಾರ್ಥಿನಿಯರ ಶೌಚಾಲ ಯದ ಗೋಡೆಗಳಿಗೂ ಹಾನಿ ಮಾಡಿದ್ದಾರೆ. ಮೆಟ್ಟಿಲುಗಳ ಮೇಲೆ ಬಿಯರ್ ಬಾಟಲಿಗಳನ್ನು ಒಡೆದು ಹಾಕಿದ್ದಾರೆ.

‘ಕಳೆದ ತಿಂಗಳಲ್ಲೂ ಒಂದು ಬಾಗಿಲನ್ನು ಇದೇ ರೀತಿ ಮುರಿದು ಹಾಕಿದ್ದರು. ಆಗ ಕಾಲೇಜಿನ ಸಿಬ್ಬಂದಿ ಸೇರಿ ಸೇರಿ ಸರಿಪಡಿಸಿದ್ದೆವು. ಆದರೆ ಮತ್ತೆ ದುಷ್ಕರ್ಮಿಗಳು ಕಾಲೇಜು ಆವರಣಕ್ಕೆ ಬಂದು ಮದ್ಯಪಾನ ಮಾಡಿ ಹಾನಿ ಮಾಡಿದ್ದಾರೆ. ಇದೇ ರೀತಿ ಆದರೆ ಕಾಲೇಜಿಗೆ ವಿದ್ಯಾರ್ಥಿಗಳು ಬರುವುದಿಲ್ಲ. ಪೋಷಕರೂ ಭಯ ಪಡುತ್ತಾರೆ. ಪೊಲೀಸರು ಕೂಡಲೇ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದುಪ್ರಾಂಶುಪಾಲ ಹನುಮಂತು ಒತ್ತಾಯಿಸಿದರು.

ADVERTISEMENT

ಪ್ರಾಂಶುಪಾಲರು ನೀಡಿದ ದೂರಿನನ್ವಯ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.