ADVERTISEMENT

ಕಾಡಾನೆ ದಾಳಿ: ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 2:09 IST
Last Updated 24 ಅಕ್ಟೋಬರ್ 2020, 2:09 IST
ಶಿಂಷಾ ನದಿ ದಾಟುತ್ತಿರುವ ಕಾಡಾನೆಗಳು
ಶಿಂಷಾ ನದಿ ದಾಟುತ್ತಿರುವ ಕಾಡಾನೆಗಳು   

ಹಲಗೂರು: ಭೀಮನ ಕಿಂಡಿ ಅರಣ್ಯ ಪ್ರದೇಶದಿಂದ ಶುಕ್ರವಾರ ಬೆಳಿಗ್ಗೆ ಬಂದ ನಾಲ್ಕು ಕಾಡಾನೆಗಳು ಸಾಗ್ಯ, ಬೆನಮನಹಳ್ಳಿ ಹಾಗೂ ನಿಟ್ಟೂರು ಗ್ರಾಮಗಳಲ್ಲಿ ಕಾಣಿಸಿಕೊಂಡವು.

ಯತ್ತಂಬಾಡಿ ಗ್ರಾಮದಿಂದ ಬಂದ ಕಾಡಾನೆಗಳು ಶಿಂಷಾ ನದಿಯಲ್ಲಿ ನೀರು ಕುಡಿದು, ರೈತರ ಬೆಳೆಗಳನ್ನು ತುಳಿದು ನಾಶ ಮಾಡಿವೆ.

ಆನೆಗಳನ್ನು ಕಂಡ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದು ಆನೆಗಳನ್ನು ಕಾಡಿಗಟ್ಟಲು ಕಾರ್ಯಾಚರಣೆ ಕೈಗೊಂಡರು.

ADVERTISEMENT

‘ಸಾವಂದಿಪುರದಲ್ಲಿರುವ ಆನೆಗಳನ್ನುಭೀಮನಕಂಡಿ ಅರಣ್ಯಕ್ಕೆ ಅಟ್ಟಲಾಗುವುದು’ ಎಂದು ಅರಣ್ಯ ಇಲಾಖೆ ಅಧಿಕಾರಿ ಆಸಿಫ್ ಅಹಮದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.