ADVERTISEMENT

ಮಂಡ್ಯ| ಸಾಲಬಾಧೆ, ಅನಾರೋಗ್ಯದಿಂದ ನೊಂದಿದ್ದ ದಂಪತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 14:17 IST
Last Updated 28 ಮಾರ್ಚ್ 2023, 14:17 IST
ಚಿಕ್ಕತಾಯಮ್ಮ, ಚಿಕ್ಕೇಗೌಡ
ಚಿಕ್ಕತಾಯಮ್ಮ, ಚಿಕ್ಕೇಗೌಡ   

ಭಾರತೀನಗರ: ಸಾಲಬಾಧೆ, ಅನಾರೋಗ್ಯದಿಂದ ನೊಂದಿದ್ದ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಅರೆಚಾಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಚಿಕ್ಕತಾಯಮ್ಮ(52), ಚಿಕ್ಕೇಗೌಡ (62) ಆತ್ಮಹತ್ಯೆ ಮಾಡಿಕೊಂಡ ದಂಪತಿ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇದ್ದಾರೆ. ಇವರಿಗೆ ಕೇವಲ 20 ಗುಂಟೆ ಜಮೀನಿತ್ತು. ಇದರಲ್ಲಿ ಬರುವ ಆದಾಯದಿಂದಲೇ ಜೀವನ ಸಾಗಿಸುತ್ತಿದ್ದರು. ಈ ಮಧ್ಯೆ ಕೆಲವು ತಿಂಗಳುಗಳ ಹಿಂದೆ ಚಿಕ್ಕತಾಯಮ್ಮ ಪಾರ್ಶ್ವವಾಯು(ಲಕ್ವ) ಪೀಡಿತರಾಗಿದ್ದರು, ಚಿಕಿತ್ಸೆಗೆ ಹಣ ಹೊಂದಿಸಲು ಪರಿತಪಿಸುತ್ತಿದ್ದರು.

ಚಿಕಿತ್ಸೆಗಾಗಿ ಚಿಕ್ಕೇಗೌಡ ಸಂಬಂಧಿಗಳು, ಪರಿಚಯಸ್ಥರ ಬಳಿ ಸಾಲ ಮಾಡಿದ್ದರು. ಇದರಿಂದ ದಿನದಿಂದ ದಿನಕ್ಕೆ ಆರ್ಥಿಕ ಮುಗ್ಗಟ್ಟು ಹೆಚಾಗಿದ್ದರಿಂದ ಮನನೊಂದ ದಂಪತಿ ಮಂಗಳವಾರ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳವಾರ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಸಂಬಂಧ ಪೊಲೀಸ್‌ ಠಾಣಡೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.