ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್ಎಸ್ ಬೃಂದಾವನ ಉದ್ಯಾನದ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕ ಹಾಗೂ ಕೆಳ ಸೇತುವೆ ಸುಂಕ ಅ.1ರಿಂದ ದುಪ್ಪಟ್ಟಾಗಲಿದೆ.
ಉದ್ಯಾನವನ ಪ್ರವೇಶಕ್ಕೆ ವಯಸ್ಕರಿಗೆ ₹50, ಮಕ್ಕಳು ₹10, ಶಾಲಾ ಮಕ್ಕಳಿಗೆ ₹5 ಹಾಗೂ ಕ್ಯಾಮೆರಾ ಬಳಸುವವರಿಗೆ ₹100 ಶುಲ್ಕ ನಿಗದಿ ಮಾಡಲಾಗಿದೆ. ವಾಹನ ನಿಲುಗಡೆ ತಾಣದಲ್ಲಿ ನಿಲ್ಲಿಸುವ ಕಾರು, ಸುಮೊ, ಕ್ವಾಲಿಸ್ಗಳಿಗೆ ₹50, ಮಿನಿ ಬಸ್ಗೆ ₹70, ಬಸ್ ₹100, ದ್ವಿಚಕ್ರ ವಾಹನಕ್ಕೆ ₹10 ಹಾಗೂ ತ್ರಿಚಕ್ರ ವಾಹನಕ್ಕೆ ₹20 ಶುಲ್ಕ ಇರುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.