ADVERTISEMENT

ಆರ್ಯ ಈಡಿಗ ಸಮಾಜ ಬೆಂಬಲಿಸಲಿ

ಸಭೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 10:33 IST
Last Updated 29 ನವೆಂಬರ್ 2019, 10:33 IST
ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಕುಮಾರ ಬಂಗಾರಪ್ಪ ಮಾತನಾಡಿದರು
ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಕುಮಾರ ಬಂಗಾರಪ್ಪ ಮಾತನಾಡಿದರು   

ಕೆ.ಆರ್.ಪೇಟೆ: ‘ಶೋಷಿತ ವರ್ಗಗಳ ನಾಯಕ ಎಸ್‌.ಬಂಗಾರಪ್ಪ ಅವರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ ಬಿಜೆಪಿಯನ್ನು ಆರ್ಯ ಈಡಿಗ ಸಮಾಜದ ಬಂಧುಗಳು ಬೆಂಬಲಿಸ ಬೇಕು. ನಾರಾಯಣಗೌಡರಿಗೆ ಮತ ನೀಡಬೇಕು’ ಎಂದು ಶಾಸಕ ಕುಮಾರ್ ಬಂಗಾರಪ್ಪ ಮನವಿ ಮಾಡಿದರು.

ಪಟ್ಟಣದ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ನಡೆದ ಶೋಷಿತ ವರ್ಗಗಳ ಜನರು ಹಾಗೂ ಆರ್ಯ ಈಡಿಗ ಜನಾಂಗದವರ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳಿಗೆ ಯಡಿಯೂರಪ್ಪನವರು ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರು ಒಂದು ಜಾತಿಗೆ ಸೀಮಿತವಾಗದೇ ಹಿಂದುಳಿದ ವರ್ಗ ಮತ್ತು ದಲಿತರ ಪರವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರ ಕೈಬಲಪಡಿಸಬೇಕು. ಎಲ್ಲಾ ಜಾತಿ ಹಾಗೂ ವರ್ಗದ ಜನರು ನಾರಾಯಣಗೌಡರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ವರನಟ ಡಾ.ರಾಜಕುಮಾರ್ ಮತ್ತು ಎಸ್.ಬಂಗಾರಪ್ಪ ಅವರು ಆರ್ಯ ಈಡಿಗ ಸಮಾಜದ ಎರಡು ರತ್ನಗಳು ಎಂದು ಬಣ್ಣಿಸಿದರು.

ಮಂಡ್ಯ ನಗರಸಭೆ ಮಾಜಿ ಅಧ್ಯಕ್ಷ ಅರುಣ್ ಕುಮಾರ್, ಅಣ್ಣಯ್ಯ, ನಂಜುಂಡ, ಪ್ರಕಾಶ್, ಮಹೇಶ್, ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.