
ಪ್ರಜಾವಾಣಿ ವಾರ್ತೆತಿ.ನರಸೀಪುರ: ರಾಜ್ಯ ಸಂಸದರ ಹಾಗೂ ರಾಜ್ಯ ಸರ್ಕಾರದ ಕೃಷಿ ಸಚಿವರ ಬೇಜವಾಬ್ದಾರಿತನದಿಂದಾಗಿ ರಾಜ್ಯದ ರೈತರಿಗೆ ಸಿಗಬೇಕಾದ ರಸಗೊಬ್ಬರ ಆಂಧ್ರ ಪ್ರದೇಶದ ಪಾಲಾಗುತ್ತಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಖಂಡಿಸಿದೆ.
ರಾಜ್ಯದ ರೈತರಿಗೆ ರಸಗೊಬ್ಬರ ಸಾಕಾಗುತ್ತಿಲ್ಲ. ಇಂತಹ ವೇಳೆ ರಾಜ್ಯದ ಲೋಕಸಭಾ ಸದಸ್ಯರು ಹಾಗೂ ಕೃಷಿ ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚಿನ ರಸಗೊಬ್ಬರ ತರಿಸಿ ರೈತರಿಗೆ ಸರಬರಾಜು ಮಾಡುವ ಬದಲು ನಿರ್ಲಕ್ಷ್ಯ ತೋರಿಸಿದ್ದಾರೆ.
ಇದರ ಪರಿಣಾಮವಾಗಿ ನಮ್ಮ ರೈತರು ಈಗ ಸಂಕಷ್ಟಕ್ಕೀಡಾಗುವಂತಾಗಿದೆ. ಇದರಿಂದ ರಸಗೊಬ್ಬರದ ಕೊರತೆ ಉಂಟಾದಲ್ಲಿ ಅದರ ಬೆಲೆ ಕೂಡ ಹೆಚ್ಚಾಗುವುದು ರೈತರಿಗೆ ಮತ್ತಷ್ಟು ಹೊರೆ ಮಾಡಿದೆ. ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಅಧ್ಯಕ್ಷ ಆಲಗೂಡು ಮಹಾದೇವ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.