ನಂಜನಗೂಡು: ತಾಲ್ಲೂಕಿನ ಹಲವೆಡೆ ಬತ್ತದ ಬೆಳೆಗೆ ಗರಿ ಸುತ್ತ ಹುಳ, ಕೊಳವೆ ಹುಳ, ಬೆಂಕಿ ರೋಗ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಚಿಕ್ಕಯ್ಯನಛತ್ರ ಹೋಬಳಿ ಏಚಗಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ರೈತ ಪಾಠಶಾಲೆಯಲ್ಲಿ ಕೃಷಿ ವಿಜ್ಞಾನಿ ಡಾ.ಅರಸು ಮಲ್ಲಯ್ಯ ರೋಗ ನಿವಾರಣೆ ಕುರಿತ ಪ್ರತಾಕ್ಷಿಕೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೇವಿನ ಮೂಲದ ಕೀಟ ನಾಶಕ ಅಥವಾ 2 ಮಿ. ಲೀಟರ್ ಪ್ರಮಾಣದ ಎಕಾಲಕ್ಸ್ ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಅಥವಾ ಮಾನೋಕ್ರೊಟೊಫಾಸ್ ಅನು್ನ 1.5 ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು.
ಇದರ ಜೊತೆಗೆ 1 ಗ್ರಾಂ ಬಾವಿಸ್ಟನ್ ಅನ್ನು ಒಂದು ಲೀಡರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಮೇಲು ಗೊಬ್ಬವಾಗಿ ಯೂರಿಯಾ ಕೊಡಬಾರದು.
ನಂತರ ನೀರನ್ನು ಹೊರ- ತೆಗೆದು ಬತ್ತ ಸುಟ್ಟ ಬೂದಿಯನ್ನು ರೋಗ ಬಂದಿರುವ ಜಾಗಕ್ಕೆ ನೀಡಬೇಕು, ತೆಂಡೆ ಹೊಡೆಯುವ ಸಂದರ್ಭದಲ್ಲಿ ರೋಗ ಇಲ್ಲದ ಕಡೆ ಎಕರೆಗೆ ಎಕರೆಗೆ 22 ಕೆ.ಜಿ. ಯೂರಿಯಾ ಗೊಬ್ಬರವನು್ನ 8–10 ದಿನ ತಡೆದು ಮೇಲು ಗೊಬ್ಬರವಾಗಿ ಒದಗಿಸಬೇಕು. 2ದಿನ ನೀರನ್ನು ಕಟ್ಟಬೇಕು.
ತೆಂಡ ಹೊಡೆಯುವ ಹಂತದಲ್ಲಿ 2 ಅಂಗುಲ ನೀರು ನಿಲ್ಲುವಂತೆ ನೋಡಿ ಕೊಳ್ಳಬೇಕು ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.