ಮೈಸೂರು: ರಾಜ್ಯದ ವಿವಿಧ ಮಠಗಳಿಗೆ ರಾಜ್ಯ ಸರ್ಕಾರ ₨ 66 ಕೋಟಿ ಅನುದಾನವನ್ನು ಬುಧವಾರ ಬಿಡುಗಡೆ ಮಾಡಿದೆ. ಇದರಲ್ಲಿ ಮೈಸೂರು ಜಿಲ್ಲೆಯ ಫಲಾನುಭವಿ ಮಠ, ಸಂಘಸಂಸ್ಥೆಗಳ ವಿವರ ಇಲ್ಲಿದೆ.
*ಮೈಸೂರಿನ ಸಿದ್ಧಾರ್ಥನಗರದ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ವಿಭಾಗೀಯ ಶಾಖಾ ಮಠಕ್ಕೆ ಬಾಲಕೀಯರ ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ ರೂ ₨ 2 ಕೋಟಿ.
*ಕನಕ ಸಮುದಾಯ ಭವನದ ನಿರ್ಮಾಣಕ್ಕಾಗಿ ಹುಣಸೂರು ತಾಲ್ಲೂಕಿನ ಕುರುಬ ಸಮಾಜಕ್ಕೆ ₨ 50 ಲಕ್ಷ.
*ಕನಕ ಸಮುದಾಯ ಭವನ ನಿರ್ಮಾಣಕ್ಕೆ ತಿ.ನರಸೀಪುರದ ಟೌನ್ ಕುರುಬರ ಸಂಘಕ್ಕೆ ₨ 25 ಲಕ್ಷ.
*ಕನಕ ಸಮುದಾಯ ಭವನ ನಿರ್ಮಾಣಕ್ಕೆ ತಿ.ನರಸೀಪುರ ತಾಲ್ಲೂಕು ಕುರುಬರ ಸಂಘಕ್ಕೆ ರೂ 25 ಲಕ್ಷ.
*ಸಮುದಾಯ ಭವನ ನಿರ್ಮಾಣಕ್ಕೆ ಹುಣಸೂರು ತಾಲ್ಲೂಕಿನ ಈಡಿಗ ಸಮಾಜಕ್ಕೆ ₨ 10 ಲಕ್ಷ.
*ಸಮುದಾಯ ಭವನ ನಿರ್ಮಾಣಕ್ಕೆ ತಿ.ನರಸೀಪುರ ತಾಲ್ಲೂಕು ಹೊಸಕೆಂಪಯ್ಯನಹುಂಡಿಯ ಉಪ್ಪಾರ ಸಮಾಜಕ್ಕೆ ₨ 10 ಲಕ್ಷ.
*ಸಮುದಾಯ ಭವನ ನಿರ್ಮಾಣಕ್ಕೆ ಹುಣಸೂರು ತಾಲ್ಲೂಕಿನ ನಾಮಧಾರಿ ಸಮಾಜಕ್ಕೆ ₨ 10 ಲಕ್ಷ.
*ಹುಣಸೂರು ಮರಾಠ ಸಮುದಾಯ ಭವನ ನಿರ್ಮಾಣಕ್ಕೆ ₨ 10 ಲಕ್ಷ.
*ನಂಜನಗೂಡು ತಾಲ್ಲೂಕು ಹಾರುಪುರ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.
*ನಂಜನಗೂಡು ತಾಲ್ಲೂಕು ಹೊಸಕೋಟೆಯ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.
*ತಿ.ನರಸೀಪುರ ತಾಲ್ಲೂಕು ತುಂಬಲ ಗ್ರಾಮದ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.
*ನಂಜನಗೂಡು ತಾಲ್ಲೂಕು ತೊರಹಳ್ಳಿಮೊಲೆ ಗ್ರಾಮದ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.
*ಎಚ್.ಡಿ.ಕೋಟೆಯ ಕಾಳಿದಾಸ ಕುರುಬರ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನಕ್ಕೆ ₨ 50 ಲಕ್ಷ.
*ನಂಜನಗೂಡು ಪಟ್ಟಣದ ಉಪ್ಪಾರ ಸಮುದಾಯ ಭವನದ ನಿರ್ಮಾಣಕ್ಕೆ ₨ 25 ಲಕ್ಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.