ADVERTISEMENT

ಅಡ್ಡಂಡ ಸಿ.ಕಾರ್ಯಪ್ಪರಿಂದ ‘ರೆಪರ್ಟರಿ’ ನಿರ್ಮಾಣ

ಆ.15ಕ್ಕೆ ‘ವೀರ ಸಾವರ್ಕರ್‌’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 29 ಮೇ 2023, 15:55 IST
Last Updated 29 ಮೇ 2023, 15:55 IST
ಅಡ್ಡಂಡ ಸಿ. ಕಾರ್ಯಪ್ಪ
ಅಡ್ಡಂಡ ಸಿ. ಕಾರ್ಯಪ್ಪ   

ಮೈಸೂರು: ‘ಟಿಪ್ಪು ನಿಜ ಕನಸುಗಳು’ ನಾಟಕದ ಮೂಲಕ ವಿವಾದ ಸೃಷ್ಟಿಸಿದ್ದ, ರಂಗಾಯಣದ ನಿಕಟಪೂರ್ವ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ತಮ್ಮ ‘ಸೃಷ್ಟಿ ಕೊಡವ ರಂಗ’ ಟ್ರಸ್ಟ್‌ ಅನ್ನು ರೆಪರ್ಟರಿ ತಂಡವಾಗಿ ರೂಪಿಸಿದ್ದು, ತಂಡವು ಆ.15ರಂದು ‘ವೀರ ಸಾವರ್ಕರ್’ ನಾಟಕವನ್ನು ಪ್ರದರ್ಶಿಸಲಿದೆ.

‘ವೀರ ಸಾವರ್ಕರ್‌ ಅವರ ಹೋರಾಟದ ಕುರಿತು ಓದುತ್ತಿದ್ದಾಗ, ಅವರನ್ನು ಕೇಂದ್ರೀಕರಿಸಿದ ನಾಟಕ ಇಲ್ಲಿವರೆಗೂ ಪ್ರದರ್ಶನವಾಗಿಲ್ಲವೆಂ‌ಬುದು ಅರಿವಿಗೆ ಬಂತು‘ ಎಂದು ಕಾರ್ಯಪ್ಪ ‘ಪ್ರಜಾವಾಣಿ‘ಗೆ ತಿಳಿಸಿದರು.

‌‘ಜೂನ್‌ 15ರೊಳಗಾಗಿ ಶಶಾಂಕ್ ಹಾಗೂ ರೋಹಿತ್ ಚಕ್ರತೀರ್ಥ ಅವರ ಅಯೋಧ್ಯಾ ಪ್ರಕಾಶನವು ನಾಟಕವನ್ನು ಪ್ರಕಟಿಸಲಿದೆ. ನಗರದ ಮಾಧವ ಕೃಪಾದಲ್ಲಿ ತಾಲೀಮು ನಡೆಯಲಿದೆ. ಮೊದಲ ಹಂತದಲ್ಲಿ ರಾಜ್ಯದಾದ್ಯಂತ 100 ಪ್ರದರ್ಶನ ನಡೆಯಲಿದೆ. ಕಲಾವಿದರು ಮತ್ತು ತಂತ್ರಜ್ಞರ ಸಂಬಳ, ಸೆಟ್, ಉಪಕರಣಗಳು, ಸಾರಿಗೆ ಮತ್ತು ಇತರ ವೆಚ್ಚಗಳ ಬಗ್ಗೆ ಸಮಾನ ಮನಸ್ಕರ ಸಭೆಯಲ್ಲಿ ನಿರ್ಧರಿಸಲಿದ್ದೇವೆ’ ಎಂದರು.   

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.