ADVERTISEMENT

ಮೈಸೂರಿನಲ್ಲಿ ಬಿಜೆಪಿ ಮುಖಂಡನ ಭೀಕರ ಕೊಲೆ: ಕಾಂಗ್ರೆಸ್ ನಾಯಕನ ಕೊಲೆಗೆ ಯತ್ನ

ಪ್ರತ್ಯೇಕ ಪ್ರಕರಣದಲ್ಲಿ ತನ್ವೀರ್‌ ಸೇಠ್ ಆಪ್ತನ ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 4:18 IST
Last Updated 6 ಮಾರ್ಚ್ 2020, 4:18 IST
   
""
""

ಮೈಸೂರು:ಕುವೆಂಪು ನಗರದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷ ಎಸ್‌.ಆನಂದ್ ಅವರನ್ನು ಶುಕ್ರವಾರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಆನಂದ್

ಜನ್ಮದಿನದ ಪ್ರಯುಕ್ತ ಇವರು ಉತ್ತನಹಳ್ಳಿ ಬಳಿಯ ಸಮುದಾಯ ಭವನವೊಂದರಲ್ಲಿ ಸುಮಾರು 50 ಮಂದಿಗೆ ಔತಣಕೂಟ ಏರ್ಪಡಿಸಿದ್ದರು. ನಂತರ 6 ಮಂದಿಯೊಂದಿಗೆ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಮದ್ಯ ಸೇವಿಸುತ್ತಿದ್ದಾಗ ಇವರಲ್ಲಿ ಗಲಾಟೆ ಉಂಟಾಗಿ ಮದ್ಯದ ಬಾಟಲಿಗಳಿಂದ ತಲೆ, ಎದೆ ಭಾಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ. ಆರೋಪಿಗಳಿಗಾಗಿ‌‌ ಶೋಧಕಾರ್ಯ ನಡೆದಿದೆ ಎಂದು ಡಿಸಿಪಿ ಪ್ರಕಾಶ್ ಗೌಡ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಅಣ್ಣಯ್ಯ ಮೇಲೆ ಹಲ್ಲೆ

ADVERTISEMENT

ಮತ್ತೊಂದು‌ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಅಣ್ಣಯ್ಯ ಅವರ ಮೇಲೆ ಇಲ್ಲಿನ ಯರಗನಹಳ್ಳಿಯಲ್ಲಿ ಹಲ್ಲೆ ನಡೆದಿದೆ. ಗಾಯಗೊಂಡ ಇವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪತ್ನಿ ರಜನಿ ಅಣ್ಣಯ್ಯ ಪಾಲಿಕೆ ಸದಸ್ಯರಾಗಿದ್ದರು. ಹಲ್ಲೆ ನಡೆಸಿದ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಅಣ್ಣಯ್ಯ

ಗ್ರಾಮದೇವತೆ ಹಬ್ಬದ ವೇಳೆ ಲಾಂಗು ಝಳಪಿಸಿದ ಕೆಲವರುಕಾಂಗ್ರೆಸ್ ಮುಖಂಡರಾಗಿರುವ ರಜನಿ ಅಣ್ಣಯ್ಯ ಅವರನ್ನು ಕೊಲ್ಲಲು ಯತ್ನಿಸಿದ್ದಾರೆ.

ಓರ್ವ ಆರೋಪಿಯನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.ಯರಗನಹಳ್ಳಿಯಲ್ಲಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಆಲನಹಳ್ಳಿ ಪೊಲೀಸ್ ಠಾಣೆಯ ಎದುರುತಡರಾತ್ರಿಯವರೆಗೂ ಜನರು ಜಮಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.