ಎಚ್.ಡಿ.ಕೋಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮವಾದಮೂರ್ಬಾಂದ್ ಸುತ್ತಮುತ್ತ ಹುಲಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಕಾರ್ಯಾಚರಣೆ ನಡೆಸಿದರು.
ರಾಂಪುರ ಆನೆ ಶಿಬಿರದಿಂದ ‘ಗಣೇಶ’, ‘ಪಾರ್ಥ’ ಮತ್ತು ‘ಜಯಪ್ರಕಾಶ’ ಆನೆಗಳ ನೆರವಿನಿಂದ ಗುರುವಾರ ಕಾರ್ಯಾಚರಣೆ ನಡೆಸಲಾಯಿತು. ಗ್ರಾಮದಲ್ಲಿ ಏಳು ದಿನಗಳ ಹಿಂದೆ ಹುಲಿ ಕಾಣಿಸಿಕೊಂಡು ಹಸುವೊಂದನ್ನು ತಿಂದುಹಾಕಿತ್ತು. ಈ ಬಗ್ಗೆ ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ ಪಿ.ಎಸ್. ಚೇತನ್ ಮತ್ತು ಸಿಬ್ಬಂದಿ, ಹುಲಿ ಪತ್ತೆಗೆ ಕೂಂಬಿಂಗ್ ನಡೆಸಿದ್ದಾರೆ.
ಕೆಂಚನಹಳ್ಳಿ ಗ್ರಾಮದಲ್ಲಿಹುಲಿ ಕಂಡು ಬಂದಿದ್ದು, ಅಲ್ಲೂ ಕಾರ್ಯಾ ಚರಣೆ ಮಾಡಲಾಯಿತು. ನಂತರ ಕಳಸೂರಿನಲ್ಲಿ ಕಾಣಿಸಿ ಕೊಂಡಿತ್ತು. ಹುಲಿ ಪತ್ತೆಗೆ ಅಳವಡಿಸಿರುವ ಕ್ಯಾಮೆರಾದಲ್ಲಿ ಹುಲಿ ಪತ್ತೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.