ADVERTISEMENT

ಕಾಡಿನಿಂದ ಬಂದ ಜಿಂಕೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 13:08 IST
Last Updated 31 ಮಾರ್ಚ್ 2021, 13:08 IST
ಹುಣಸೂರು ನಗರದ ಲಾಲ್‌ಬನ್ ಬೀದಿ ದೊಡ್ಡ ಮಸೀದಿ ಬಳಿ ಬುಧವಾರ ಬೆಳಿಗ್ಗೆ  ಬೀದಿನಾಯಿ ದಾಳಿಗಳ ದಳಿಗೆ ಸಿಲುಕಿದ್ದ ಜಿಂಕೆಯನ್ನು ರಕ್ಷಿಸಲಾಯಿತು
ಹುಣಸೂರು ನಗರದ ಲಾಲ್‌ಬನ್ ಬೀದಿ ದೊಡ್ಡ ಮಸೀದಿ ಬಳಿ ಬುಧವಾರ ಬೆಳಿಗ್ಗೆ  ಬೀದಿನಾಯಿ ದಾಳಿಗಳ ದಳಿಗೆ ಸಿಲುಕಿದ್ದ ಜಿಂಕೆಯನ್ನು ರಕ್ಷಿಸಲಾಯಿತು   

ಹುಣಸೂರು: ವೀರನಹೊಸಹಳ್ಳಿ ಅರಣ್ಯದಿಂದ ದಾರಿ ತಪ್ಪಿ ಬುಧವಾರ ಬೆಳಿಗ್ಗೆ ಬಂದಿದ್ದ ಗಂಡು ಜಿಂಕೆಯನ್ನು ಸಾರ್ವಜನಿಕರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ನಗರದ ಲಾಲ್‌ಬನ್ ಬೀದಿ ದೊಡ್ಡ ಮಸೀದಿ ಬಳಿ ಬೆಳ್ಳಂ ಬೆಳಿಗ್ಗೆ ನಾಯಿಗಳ ಹಿಂಡಿನ ಮಧ್ಯೆ ಜಿಂಕೆ ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳು ಬೀದಿನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಬಂದ ಸಹಾಯಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ್ ತಂಡ ಜಿಂಕೆಯನ್ನು ವಶಕ್ಕೆ ಪಡೆದು ಪಶುವೈದ್ಯಾಧಿಕಾರಿಗಳಿಂದ ತಪಾಸಣೆ ನಡೆಸಿದ ಬಳಿಕ ಕಲ್ಲಬೆಟ್ಟ ಅರಣ್ಯಕ್ಕೆ ಬಿಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.