ADVERTISEMENT

ದಸರಾ: ಈಶ್ವರ ಆನೆ ವಾಪಸ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 9:32 IST
Last Updated 10 ಸೆಪ್ಟೆಂಬರ್ 2019, 9:32 IST
ಮೈಸೂರು ದಸರಾ ಮಹೋತ್ಸವಕ್ಕೆಂದು ಬಂದ ಮೊದಲ ಹಂತದ ಗಜಪಡೆಯಲ್ಲಿನ ಈಶ್ವರ ಆನೆ ತೂಕ ಪರೀಕ್ಷೆಯ ಸಮಯದಲ್ಲಿ ಕಂಡಿದ್ದು ಹೀಗೆ
ಮೈಸೂರು ದಸರಾ ಮಹೋತ್ಸವಕ್ಕೆಂದು ಬಂದ ಮೊದಲ ಹಂತದ ಗಜಪಡೆಯಲ್ಲಿನ ಈಶ್ವರ ಆನೆ ತೂಕ ಪರೀಕ್ಷೆಯ ಸಮಯದಲ್ಲಿ ಕಂಡಿದ್ದು ಹೀಗೆ   

ಮೈಸೂರು: ದಸರಾ ಗಜಪಡೆಯಲ್ಲಿದ್ದ ಈಶ್ವರ ಆನೆಯನ್ನು ವಾಪಸ್ ಶಿಬಿರಕ್ಕೆ ಕಳುಹಿಸಲಾಗುತ್ತಿದೆ. ನಗರದ ಪರಿಸರಕ್ಕೆ ಹೊಂದಿಕೊಳ್ಳದ ಕಾರಣ ಅರಣ್ಯಾಧಿಕಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ತಾಲೀಮು ನಡೆಸುವ ಸಂದರ್ಭ ಈಶ್ವರ ಎರಡು ಮೂರು ಸಲ ಗಲಿಬಿಲಿಕೊಂಡಿತ್ತು. ಅರಮನೆ ಆವರಣದಲ್ಲಿ ಸೋಮವಾರ ಗಜಪಡೆಯ ಇನ್ನೊಂದು ಆನೆ ಧನಂಜಯನ ಜತೆ ಜಗಳವಾಡಿತ್ತು.

‘ಜಂಬೂ ಸವಾರಿ ವೇಳೆ ಯಾವುದೇ ಲೋಪ ಸಂಭವಿಸಬಾರದು ಎಂದು ಸಚಿವರು ಹೇಳಿದ್ದಾರೆ. ಆದ್ದರಿಂದ ಈಶ್ವರ ಆನೆಯನ್ನು ವಾಪಸ್ ಕಳುಹಿಸಿ, ಬೇರೊಂದು ಆನೆಯನ್ನು ತರಲಾಗುವುದು’ ಎಂದು ಡಿಸಿಎಫ್‌ ಅಲೆಕ್ಸಾಂಡರ್‌ ತಿಳಿಸಿದರು.

ADVERTISEMENT

ದುಬಾರೆ ಶಿಬಿರದ ಈಶ್ವರ ಆನೆಯನ್ನು (49 ವರ್ಷ) ಇದೇ ಮೊದಲ ಬಾರಿಗೆ ದಸರಾ ಉತ್ಸವಕ್ಕೆ ಅಯ್ಕೆ ಮಾಡಲಾಗಿತ್ತು. ಈ ಆನೆ ಆ.22 ರಂದು ಮೊದಲ ತಂಡದಲ್ಲಿ ಮೈಸೂರಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.