ADVERTISEMENT

ಸಾಲಬಾಧೆಗೆ ಸಿಲುಕಿದ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 10:14 IST
Last Updated 12 ಡಿಸೆಂಬರ್ 2020, 10:14 IST
ವೆಂಕಟರಮಣೇಗೌಡ
ವೆಂಕಟರಮಣೇಗೌಡ   

ಬೆಟ್ಟದಪುರ: ಇಲ್ಲಿಗೆ ಸಮೀಪದ ಈಚೂರು ಗ್ರಾಮದ ವೆಂಕಟರಮಣೇಗೌಡ (54) ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರಿಗೆ ಸೀಗೂರು ಗ್ರಾಮದಲ್ಲಿ 5 ಎಕರೆ ಜಮೀನಿದ್ದು, ಶುಂಠಿ ಹಾಗೂ ಹೊಗೆಸೊಪ್ಪು ಬೆಳೆದಿದ್ದರು.

ಬೇಸಾಯಕ್ಕೆಂದು ಪಿರಿಯಾಪಟ್ಟಣದ ಕೆನರಾ ಬ್ಯಾಂಕಿನಲ್ಲಿ ಕೃಷಿ ಸಾಲವಾಗಿ ₹ 6 ಲಕ್ಷ, ಪರಿಚಯಸ್ಥರ ಬಳಿ ಖಾಸಗಿಯಾಗಿ ₹ 2 ಲಕ್ಷ ಸಾಲ ಮಾಡಿದ್ದರು.

ADVERTISEMENT

ಬೆಳೆದಿದ್ದ ತಂಬಾಕು, ಶುಂಠಿ ಬೆಳೆಗೆ ರೋಗ ತಗುಲಿದ್ದರಿಂದ ನಷ್ಟ ಉಂಟಾಗಿತ್ತು. ಇದರಿಂದ ಮನನೊಂದು ಗುರುವಾರ ಕ್ರಿಮಿನಾಶಕ ಮಾತ್ರೆ ಸೇವಿಸಿದ್ದರು. ವಿಷಯ ತಿಳಿದೊಡನೆ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ವೆಂಕಟರಮಣೇಗೌಡ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಬೆಟ್ಟದಪುರ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.