ADVERTISEMENT

ಟಿಪ್ಪು, ಗೋಡ್ಸೆ ಪಥ ಬಿಟ್ಟು ಗಾಂಧಿ ಪಥದ ಕಡೆ ಬನ್ನಿ: ವಸಂತಕುಮಾರ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 20:42 IST
Last Updated 16 ಫೆಬ್ರುವರಿ 2020, 20:42 IST
ವಸಂತಕುಮಾರ್‌
ವಸಂತಕುಮಾರ್‌   

ಮೈಸೂರು: ‘ಟಿಪ್ಪು ಪಥದಲ್ಲಿರುವವರು ಖಡ್ಗಗಳನ್ನು ಕೆಳಗಿಳಿಸಿ ಕುರಾನಿನ ಜತೆ ಹಾಗೂ ಗೋಡ್ಸೆ ಪಥದವರು ಪಿಸ್ತೂಲ್‌ ಕೆಳಗಿಟ್ಟು ಭಗವದ್ಗೀತೆ ಜತೆ ಗಾಂಧಿ ಪಥದತ್ತ ಬರಲಿ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಹೇಳಿದರು.

ಬಹುರೂಪಿ ನಾಟಕೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಗಾಂಧಿ ಪಥ‍’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಎಡ –ಬಲ ಪಂಥಗಳ ನಡುವಿನ ಚರ್ಚೆಯ ಬದಲು ಸುಳ್ಳು– ಸತ್ಯದ ನಡುವೆ, ಒಟ್ಟುಗೂಡಿಸುವ ಪಥ ಮತ್ತು ಒಡಕು ಉಂಟುಮಾಡುವ ಪಥಗಳ ನಡುವೆ ಚರ್ಚೆ ನಡೆಯಬೇಕಿದೆ ಎಂದು ವಸಂತಕುಮಾರ್ ಅವರು ಪ್ರತಿಪಾದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.