ಹಂಪಾಪುರ: ಕೊಳ್ಳೇಗಾಲದ ಯುವತಿಯೊಂದಿಗೆ ಇಸ್ರೇಲ್ನ ಯುವಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಮೀಪದ ತೆರಣಿಮುಂಟಿ ಗ್ರಾಮದ ರವಿರಾಮೇಶ್ವರ ದೇವಾಲಯದಲ್ಲಿ ಇಸ್ರೇಲ್ನ ಯೂರಿ ಮತ್ತು ಮರೀನಾ ದಂಪತಿ ಪುತ್ರ ಮೈಕೆಲ್ ಹಾಗೂ ಕೊಳ್ಳೇಗಾಲದ ನಿವಾಸಿ ಪಾಲ್ಗಾಟ್ ಅಯ್ಯರ್ ಶರ್ಮ ಹಾಗೂ ಶೋಭಾ ದಂಪತಿ ಪುತ್ರಿ ರೇವತಿ ನಾಲ್ಕು ದಿನಗಳ ಹಿಂದೆ ಸರಳವಾಗಿ ಮದುವೆಯಾಗಿದ್ದಾರೆ. ರವಿರಾಮೇಶ್ವರ ದೇವಾಲಯದ ಅರ್ಚಕ ಭಾಸ್ಕರ್ ಪೌರೋಹಿತ್ಯ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.