ADVERTISEMENT

ಅರಮನೆ ಆವರಣದಲ್ಲಿ ಜಂಬೂಸವಾರಿ ರಿಹರ್ಸಲ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 6:15 IST
Last Updated 4 ಅಕ್ಟೋಬರ್ 2022, 6:15 IST
ಮೈಸೂರಿನ ಅಂಬಾವಿಲಾಸ ಅರಮನೆಯ ಆವರಣದಲ್ಲಿ ಸೋಮವಾರ ನಡೆದ ಜಂಬೂಸವಾರಿ ರಿಹರ್ಸಲ್‌ನಲ್ಲಿ ಶಾಸಕ ಎಲ್.ನಾಗೇಂದ್ರ ಹಾಗೂ ಆಧಿಕಾರಿಗಳು ಪಾಲ್ಗೊಂಡಿದ್ದಾರೆ
ಮೈಸೂರಿನ ಅಂಬಾವಿಲಾಸ ಅರಮನೆಯ ಆವರಣದಲ್ಲಿ ಸೋಮವಾರ ನಡೆದ ಜಂಬೂಸವಾರಿ ರಿಹರ್ಸಲ್‌ನಲ್ಲಿ ಶಾಸಕ ಎಲ್.ನಾಗೇಂದ್ರ ಹಾಗೂ ಆಧಿಕಾರಿಗಳು ಪಾಲ್ಗೊಂಡಿದ್ದಾರೆ   

ಮೈಸೂರು: ಇಲ್ಲಿನ ಅರಮನೆ ಆವರಣದಲ್ಲಿ ಸೋಮವಾರ ಜಂಬೂಸವಾರಿ ರಿಹರ್ಸಲ್‌ ಯಶಸ್ವಿಯಾಗಿ ನೆರವೇರಿತು.

ವಿಜಯದಶಮಿ ಮೆರವಣಿಗೆಯ ಹಿನ್ನೆಲೆಯಲ್ಲಿ ತಾಲೀಮು ನಡೆಸಲಾಯಿತು. ಇದು 3ನೇ ದಿನದ ತಾಲೀಮಾಗಿದೆ.

ವಿಜಯ ದಶಮಿಯಂದು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಾಗುತ್ತದೆ. ಅದೇ ಮಾದರಿಯಲ್ಲಿ ನಡೆದ ತಾಲೀಮಿನಲ್ಲಿ ಮುಖ್ಯ ಅತಿಥಿಯಾಗಿ ಶಾಸಕ ಎಲ್.ನಾಗೇಂದ್ರ ಭಾಗವಹಿಸಿದ್ದರು. ಅವರೊಂದಿಗೆ ಡಿಸಿಎಫ್‌ ಕರಿಕಾಳನ್, ಎಸಿಪಿ ಚಂದ್ರಶೇಖರ್‌ ಮತ್ತು ಅಧಿಕಾರಿಗಳು–ಸಿಬ್ಬಂದಿ ಇದ್ದರು.

ADVERTISEMENT

ನಾಯಕ ಅಭಿಮನ್ಯು ನೇತೃತ್ವದ ಗಜಪಡೆಯೊಂದಿಗೆ ಆಶ್ವಾರೋಹಿ ದಳವೂ ಪಾಲ್ಗೊಂಡಿತ್ತು. ಪೊಲೀಸರು ತಾಲೀಮಿನಲ್ಲಿ ಭಾಗವಹಿಸಿದ್ದರು. ಅರಮನೆ ಆವರಣದ ವಿಶೇಷ ವೇದಿಕೆಯ ಎದುರಿಗೆ ಕರೆತರಲಾದ ಅಭಿಮನ್ಯುಗೆ ನಗರ ಸಶಸ್ತ್ರ ಮೀಸಲು ಪಡೆಯಿಂದ ಗೌರವವಂದನೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.