ADVERTISEMENT

ಎಚ್.ಡಿ.ಕೋಟೆ: ಚಿರತೆ ದಾಳಿ-ವ್ಯಕ್ತಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 12:02 IST
Last Updated 13 ಜನವರಿ 2022, 12:02 IST
ಚಿರತೆ ದಾಳಿ
ಚಿರತೆ ದಾಳಿ   

ಹಂಪಾಪುರ: ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಕೋಳಗಾಲದ ಚಂದ್ರರಾಜ ಅರಸ್ ಎಂಬುವವರ ಮೇಲೆ ಗುರುವಾರ ಚಿರತೆಯೊಂದು ದಾಳಿ ನಡೆಸಿ ಗಾಯಗೊಳಿಸಿದೆ.

ಚಿರತೆಯನ್ನು ನೋಡಿ ಇವರ ಕೊಟ್ಟಿಗೆಯಲ್ಲಿದ್ದ ಹಸು, ಕರುಗಳು ಜೋರಾಗಿ ಶಬ್ದ ಮಾಡಿವೆ. ಶಬ್ದವನ್ನು ಕೇಳಿದ ಇವರು ಕೊಟ್ಟೆಗೆಗೆ ಬಂದು ನೋಡಿದಾಗ ಚಿರತೆಯು ಇವರ ಮೇಲೆ ಎರಗಿ ತಲೆ, ಮೊಣಕೈ, ಬೆನ್ನುಗಳನ್ನು ಗಾಯಗೊಳಿಸಿದೆ.

ಇವರ ಕೂಗಾಟ ಕೇಳಿ ಅಕ್ಕಪಕ್ಕದವರು ಬಂದು ನೋಡುವಷ್ಟರಲ್ಲಿ ಚಿರತೆ ಪರಾರಿಯಾಗಿತ್ತು. ಗಾಯಗೊಂಡ ಇವರನ್ನು ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ.

ADVERTISEMENT

ಕಳೆದ ಮೂರು ದಿನಗಳ ಹಿಂದೆಯಷ್ಟೇ ಮಾದಪುರ–ಚಕ್ಕೂರು ಮಧ್ಯ ಇರುವ ಕಪಿಲಾ ನದಿಯಲ್ಲಿ ಎರಡು ಚಿರತೆಗಳು ಈಜಾಡುತ್ತಿರುವುದನ್ನು ನೋಡಿದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ದಾಳಿ ಮಾಡಿರುವ ಚಿರತೆ ಇದೇ ಚಿರತೆಯಾಗಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.