ADVERTISEMENT

ಕೊಲೆ ಪ್ರಕರಣ; ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 22:17 IST
Last Updated 21 ಜನವರಿ 2020, 22:17 IST

ಮೈಸೂರು: ಮೇಕೆಗಳನ್ನು ಕದ್ದು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ, ಬೆಲವತ್ತ ಗ್ರಾಮದಲ್ಲಿ ಗುಂಪೊಂದು ಜಹೀರುದ್ದೀನ್‌ (35) ಎಂಬುವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಮೂವರು ಆರೋಪಿಗಳನ್ನು ಇಲ್ಲಿನ ಮೇಟಗಳ್ಳಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬೆಲವತ್ತ ಗ್ರಾಮದ ನಿವಾಸಿಗಳಾದ ಭರತ್ (30), ಮಹೇಶ್ (22) ಹಾಗೂ ರವಿ (30) ಬಂಧಿತರು.

ಭಾನುವಾರ ಪರಾರಿಯಾಗುವಾಗ ಜಹೀರುದ್ದೀನ್ ಮೇಲೆ ಆಟೊ ಮಗುಚಿ ಬಿದ್ದಿತು. ಈ ವೇಳೆ ಇವರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡ ಇವರು ಸ್ಥಳದಲ್ಲೇ ಮೃತಪಟ್ಟಿದ್ದರು.

ADVERTISEMENT

‘ಜಹೀರುದ್ದೀನ್‌ ಮೇಲೆ ಆಟೊ ಮಗುಚಿ ಬಿದ್ದು, ಮೃತಪಟ್ಟಿದ್ದಾರೆಯೇ ಹೊರತು ಹಲ್ಲೆಯಿಂದ ಅಲ್ಲ’ ಎಂದು ಗ್ರಾಮಸ್ಥರು ತಿಳಿಸಿದ್ದರು. ಆದರೆ, ಜಹೀರುದ್ದೀನ್ ಸೋದರ ರೆಹಮತ್‌ ಉಲ್ಲಾ ನೀಡಿದ ದೂರಿನ ಅನ್ವಯ, ಕೊಲೆ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.