ADVERTISEMENT

ಮೈಸೂರು: ರಂಜಿಸಿದ ‘ನವಿಲು ಪುರಾಣ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 15:58 IST
Last Updated 27 ಜನವರಿ 2023, 15:58 IST
ನಿರಂತರ ಪ್ರತಿಷ್ಠಾನದಿಂದ ಶುಕ್ರವಾರ ಕಿರು ರಂಗಮಂದಿರದಲ್ಲಿ ನಡೆದ ‘ನಿರಂತರ ರಂಗ ಉತ್ಸವ’ದಲ್ಲಿ ಸುರೇಶ್ ಅನಗಳ್ಳಿ ನಿರ್ದೇಶನದ ‘ನವಿಲು ಪುರಾಣ’ ನಾಟಕವನ್ನು ಬೆಂಗಳೂರಿನ ‘ಅನೇಕ’ ತಂಡದವರು ಪ್ರದರ್ಶಿಸಿದರು/ ಪ್ರಜಾವಾಣಿ ಚಿತ್ರ
ನಿರಂತರ ಪ್ರತಿಷ್ಠಾನದಿಂದ ಶುಕ್ರವಾರ ಕಿರು ರಂಗಮಂದಿರದಲ್ಲಿ ನಡೆದ ‘ನಿರಂತರ ರಂಗ ಉತ್ಸವ’ದಲ್ಲಿ ಸುರೇಶ್ ಅನಗಳ್ಳಿ ನಿರ್ದೇಶನದ ‘ನವಿಲು ಪುರಾಣ’ ನಾಟಕವನ್ನು ಬೆಂಗಳೂರಿನ ‘ಅನೇಕ’ ತಂಡದವರು ಪ್ರದರ್ಶಿಸಿದರು/ ಪ್ರಜಾವಾಣಿ ಚಿತ್ರ   

ಮೈಸೂರು: ಇಲ್ಲಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ನಿರಂತರ ಪ್ರತಿಷ್ಠಾನದಿಂದ ನಡೆಯುತ್ತಿರುವ ‘ನಿರಂತರ ರಂಗೋತ್ಸವ’ದಲ್ಲಿ 3ನೇ ದಿನವಾದ ಶುಕ್ರವಾರ ಪ್ರದರ್ಶನಗೊಂಡ ‘ನವಿಲು ಪುರಾಣ’ ಪ್ರೇಕ್ಷಕರನ್ನು ರಂಜಿಸಿತು.

ಬೆಂಗಳೂರಿನ ‘ಅನೇಕ’ ತಂಡದವರು ಪ್ರಸ್ತುತಪಡಿಸಿದರು.

ರಂಗ ಕಲಾವಿದೆ ಇಂದಿರಾ ನಾಯರ್ ರಂಗ ಸಂಗೀತ ನಿರ್ದೇಶಕ ಶ್ರೀನಿವಾಸ ಭಟ್ (ಚೀನಿ) ಅವರಿಗೆ ನಮನ ಸಲ್ಲಿಸಿದರು. ‘ನಿರಂತರ ರಂಗೋತ್ಸವವನ್ನು 14 ವರ್ಷದಿಂದ ಶಿಸ್ತಿನಿಂದ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.

ADVERTISEMENT

ರಂಗ ಕಲಾವಿದ ನಾ.ದಿವಾಕರ್ ಮಾತನಾಡಿ, ‘ರಂಗ ಭೂಮಿಗೆ ಚಿಕಿತ್ಸಕ ಗುಣವಿದೆ’ ಎಂದು ಹೇಳಿದರು.

ರಂಗ ಕಲಾವಿದ ಕೆ‌.ಇ.ರಾಧಾಕೃಷ್ಣ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.