ADVERTISEMENT

ಮಂಡ್ಯ: ಮಳೆಗೆ ನೆಲಕಚ್ಚಿದ ವೀಳ್ಯದೆಲೆ ತೋಟ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 7:23 IST
Last Updated 1 ಅಕ್ಟೋಬರ್ 2020, 7:23 IST
ಹಲಗೂರಿನಲ್ಲಿ ಮಳೆ– ಗಾಳಿಗೆ ನೆಲಕಚ್ಚಿದ ವೀಳ್ಯದೆಲೆ ತೋಟ
ಹಲಗೂರಿನಲ್ಲಿ ಮಳೆ– ಗಾಳಿಗೆ ನೆಲಕಚ್ಚಿದ ವೀಳ್ಯದೆಲೆ ತೋಟ   

ಮೈಸೂರು: ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿ ಮತ್ತು ಬುಧವಾರ ಬಿರುಸಿನ ಮಳೆಯಾಗಿದೆ.

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಗಾಳಿಗೆ, ಮಂಡ್ಯ ಜಿಲ್ಲೆಯ ಹಲಗೂರು ಸಮೀಪದ ಕರಲಕಟ್ಟೆ ಗ್ರಾಮದಲ್ಲಿ ವೀಳ್ಯದೆಲೆ ತೋಟ ನೆಲ ಕಚ್ಚಿದೆ. ಬ್ಯಾಡರಹಳ್ಳಿ ಗ್ರಾಮದ ಶಂಕರ ಮತ್ತು ಬಾಳೆಹೊನ್ನಿಗ ಗ್ರಾಮದ ಒಂಬತ್ತು ರೈತರು ಒಟ್ಟಾಗಿ ಸೇರಿ ಮೂರು ವರ್ಷಗಳಿಂದ ವೀಳ್ಯದೆಲೆ ತೋಟ ಮಾಡಿದ್ದರು.

ಮೈಸೂರು ಸೇರಿದಂತೆ, ಜಿಲ್ಲೆಯ ವರುಣಾ, ತಿ.ನರಸೀಪುರ, ಬನ್ನೂರು ಹಾಗೂ ಬಿಳಿಕೆರೆ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ.ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ADVERTISEMENT

ಕಲಬುರ್ಗಿ ನಗರದಲ್ಲಿ ಸಂಜೆ ಧಾರಾಕಾರ ಮಳೆಯಾಯಿತು. ಬೀದರ್ ನಗರ ಸೇರಿದಂತೆ ಜಿಲ್ಲೆಯ ಭಾಲ್ಕಿ, ಔರಾದ್ ಹಾಗೂ ಕಮಲನಗರದಲ್ಲಿ ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.