ADVERTISEMENT

ಮುಖ್ಯಮಂತ್ರಿಗೆ ನಿಂದನೆ: ಕಾರಾಗೃಹ ವಾರ್ಡರ್‌ ಬಂಧನ

​ಪ್ರಜಾವಾಣಿ ವಾರ್ತೆ
Published 6 ಮೇ 2025, 14:07 IST
Last Updated 6 ಮೇ 2025, 14:07 IST
<div class="paragraphs"><p>ಎಚ್‌.ಎನ್‌.ಮಧುಕುಮಾರ್‌</p></div>

ಎಚ್‌.ಎನ್‌.ಮಧುಕುಮಾರ್‌

   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಬಿಟ್ಟ ಆರೋಪದ ಮೇರೆಗೆ ಇಲ್ಲಿನ ಕೇಂದ್ರ ಕಾರಾಗೃಹದ ವಾರ್ಡರ್‌, ಸಾಲಿಗ್ರಾಮ ನಿವಾಸಿ ಎಚ್.ಎನ್.ಮಧುಕುಮಾರ್‌ ಅವರನ್ನು ಮಂಗಳವಾರ ಬೆಟ್ಟದಪುರ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.

‘ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮುಖ್ಯಮಂತ್ರಿಯು ಎಎಸ್‌ಪಿ ವಿರುದ್ಧ ಕೈ ಎತ್ತಿದ್ದನ್ನು ಖಂಡಿಸಿ ಏ.28ರಂದು ಮಧುಕುಮಾರ್‌ ವಿಡಿಯೊ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರು ವಾಟ್ಸಪ್‌ ಮೂಲಕ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.