ADVERTISEMENT

ಕಲಾವಿದರಿಗೆ ಸಮರ್ಪಕವಾಗಿ ಪ್ರತಿ ತಿಂಗಳೂ ಗೌರವಧನ ಕೊಡಿ‌: ಸೋಬಾನೆ ಗೌರಮ್ಮ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 13:05 IST
Last Updated 5 ಮಾರ್ಚ್ 2022, 13:05 IST
   

ಮೈಸೂರು: ಕಲಾವಿದರಿಗೆ ಸಮರ್ಪಕವಾಗಿ ಪ್ರತಿ ತಿಂಗಳೂ ಗೌರವಧನ ಕೊಡಿ‌. ನಿಮ್ಮಿಂದ ಹಾಡಿ ಬದುಕು ಕಟ್ಟಿಕೊಳ್ಳುತ್ತೇವೆ ಎಂದು ಕಲಾವಿದರಾದ ಸೋಬಾನೆ ಗೌರಮ್ಮ ಸಚಿವ ಎಸ್.ಟಿ.ಸೋಮಶೇಖರ್ ಅವರಲ್ಲಿ ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ವಿಶೇಷ ಘಟಕ ಯೋಜನೆಯಡಿ ಇಲ್ಲಿನ ರಂಗಾಯಣದಲ್ಲಿ ಶನಿವಾರ ಏರ್ಪಡಿಸಿದ್ದ 'ರಂಗಾಯಣದಂಗಳದಲ್ಲಿ ಜನಪದರು' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು‌.

ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ‌. ನಿಮ್ಮಿಂದ ನನ್ನಂತಹ ಬಡವರು ಬದುಕು ಕಟ್ಟಿಕೊಳ್ಳುತ್ತಾರೆ ಎಂದರು‌.

ADVERTISEMENT

ನಂತರ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ ಗೌರಮ್ಮ ಅವರು ಹೇಳಿರುವ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.