ಮೈಸೂರು: ‘ಹುಣಸೂರನ್ನು ದೇವರಾಜು ಅರಸು ಜಿಲ್ಲೆಯನ್ನಾಗಿ ಮಾಡುವೆ ಎಂದು ಹೇಳಲು ಎಚ್.ವಿಶ್ವನಾಥ್ ಯಾರು’ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಮಂಗಳವಾರ ಇಲ್ಲಿ ಹರಿಹಾಯ್ದರು.
‘ಹುಣಸೂರು ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ನನ್ನ ಹಾಗೂ ಅಲ್ಲಿನ ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯವೇ ಬೇಕಿಲ್ಲ. ಅವರು ಯಾರು ? ಎಂದು ಕೇಳಿದ್ದಾರೆ. ವಿಶ್ವನಾಥ್ ಅವರ ಈ ಪ್ರಶ್ನೆಗೆ ಜನ ಈಗಾಗಲೇ ಉತ್ತರ ನೀಡಿದ್ದಾರೆ. ತಾವು ಯಾರು ಎಂಬುದನ್ನೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದರು.
‘ಕೆ.ಆರ್.ನಗರದ ಜನರು ನನ್ನನ್ನು 3 ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಹುಣಸೂರನ್ನು ಜಿಲ್ಲೆ ಮಾಡುತ್ತೇನೆ ಎಂದು ಹೇಳಲು ವಿಶ್ವನಾಥ್ ಯಾರು ? ಅವರೇನು ಜನಪ್ರತಿನಿಧಿಯೇ?’ ಎಂದು ಕಿಡಿಕಾರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.