ಮೈಸೂರು: ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ಯುವ ದಸರಾ’ ಕಾರ್ಯಕ್ರಮವನ್ನು 7 ದಿನಗಳ ಬದಲಿಗೆ 6 ದಿನಗಳಿಗೆ ಕಡಿತಗೊಳಿಸಲಾಗಿದೆ!
ಈ ಮುಂಚೆ ತಿಳಿಸಿದ್ದಂತೆ, ಸೆ.27ರಿಂದ 7 ದಿನಗಳವರೆಗೆ ಹಮ್ಮಿಕೊಳ್ಳಲಾಗಿತ್ತು. ಪರಿಷ್ಕೃತ ಪಟ್ಟಿಯ ಪ್ರಕಾರ ಸೆ.27ರ ಬದಲಿಗೆ ಸೆ.28ರಂದು ಚಾಲನೆ ಪಡೆಯಲಿದೆ. ಸೆ.28ರಂದು ಸಂಜೆ 6ಕ್ಕೆ ಉದ್ಘಾಟನೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೆರವೇರಿಸಲಿದ್ದಾರೆ. ನಟ ಸುದೀಪ್ ಭಾಗವಹಿಸದಿರುವ ಕಾರಣದಿಂದಾಗಿ ವಿಶೇಷ ಆಹ್ವಾನಿತರನ್ನಾಗಿ ನಟ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಅವರನ್ನು ಆಹ್ವಾನಿಸಲಾಗಿದೆ.
‘ಯುವಜನರಿಗೆ ಸ್ಫೂರ್ತಿ ದೊರೆಯಲೆಂದು ಮೊದಲ ದಿನವೇ ‘ಅಪ್ಪು ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಎಸ್ಪಿ ಆರ್.ಚೇತನ್ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.