ADVERTISEMENT

ಕಾಂಗ್ರೆಸ್‌ಗೆ ವ್ಯಕ್ತಿಗಿಂತ ಪಕ್ಷದ ಸಿದ್ಧಾಂತ ಮುಖ್ಯ: ಜಾರಕಿಹೊಳಿ

ಜಾಫರ್ ಷರೀಫ್‌ಗೆ ತಪ್ಪಿದ ಟಿಕೆಟ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 8:09 IST
Last Updated 20 ಮಾರ್ಚ್ 2014, 8:09 IST

ರಾಯಚೂರು: ಪಕ್ಷದ ಹಿರಿಯ ಮುಖಂಡರು, ಕೇಂದ್ರ ಮಾಜಿ ಸಚಿವ ಜಾಫರ್ ಷರೀಫ್ ಅವರಿಗೆ ಪಕ್ಷ ಟಿಕೆಟ್ ಈ ಬಾರಿ ಕೊಟ್ಟಿಲ್ಲ. ಹಾಗಂತ ಅದರಿಂದ ಪಕ್ಷದ ಮೇಲೆ ಯಾವುದೇ ತೊಂದರೆ ಆಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ವ್ಯಕ್ತಿಗಿಂತ ಪಕ್ಷದ
ಸಿದ್ಧಾಂತ ಮುಖ್ಯವಾಗಿದೆ.

ಮುಖ್ಯಮಂತ್ರಿಗಳು ಶರೀಫ್ ಅವರ ಜೊತೆಗೆ ಮಾತುಕತೆ ನಡೆಸಿ  ಅಸಮಾಧಾನ ಹೋಗಲಾ­ಡಿ­ಸುವ ಪ್ರಯತ್ನ ಮಾಡಿದ್ದಾರೆ ಎಂದು ರಾಜ್ಯ ಅಬಕಾರಿ ಖಾತೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬುಧವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ  ಮುಖಂಡರು, ಮುಖಂಡರು, ಪದಾ­ಧಿಕಾರಿ­ಗಳೊಂದಿಗೆ ಸಭೆ ನಡೆಸಲು ಅವರು ಸುದ್ದಿಗಾರ­ರೊಂದಿಗೆ ಮಾತನಾಡಿದರು.

ಷರೀಫ್‌ ಅವರಿಗೆ ಟಿಕೆಟ್ ದೊರ­ಕಿಲ್ಲ ಎಂಬ ಕಾರಣಕ್ಕೆ ಅಲ್ಪ­ಸಂಖ್ಯಾತರ ಮತಗಳು ಕಾಂಗ್ರೆಸ್ ಪಕ್ಷದಿಂದ ವಿಭಜನೆ ಆಗುತ್ತದೆ ಎಂಬುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಮೋದಿ ಅವರ ಅಲೆ ಎಲ್ಲೂ ಇಲ್ಲ. ಕಾಂಗ್ರೆಸ್ ಪಕ್ಷವು ತನ್ನ ಶಕ್ತಿಯೊಂದಿಗೆ ರಾಜ್ಯದ ಎಲ್ಲ ಸ್ಥಾನ ಗೆಲ್ಲುವ ಆಶಯ ಹೊಂದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.