ADVERTISEMENT

ದೇವರಿಗೆ ಚಿನ್ನದ ಕಿರೀಟ ಹಾಕಿದವರು ಕಂಬಿ ಎಣಿಸುತ್ತಿದ್ದಾರೆ: ಶ್ರುತಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 8:53 IST
Last Updated 17 ಏಪ್ರಿಲ್ 2013, 8:53 IST

ಹಟ್ಟಿ ಚಿನ್ನದ ಗಣಿ:  ದೇವರಿಗೆ ಚಿನ್ನದ ಕಿರೀಟ ಮಾಡಿಸಿ ಹಾಕಿದವರು ಇವತ್ತು ಕಂಬಿ ಎಣಿಸುತ್ತಿದ್ದಾರೆ. ಉತ್ತಮ ಜನ ಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ಚಿತ್ರ ನಟಿ ಶ್ರುತಿ ಹೇಳಿದರು.

ಸೋಮವಾರ ಹಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಕೆಜೆಪಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಲಿಂಗಸುಗೂರ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಚ್‌ಬಿ ಮುರಾರಿ ಅವರಿಗೆ ಮತ ಹಾಕುವಂತೆ ಕೇಳಿಕೊಂಡರು.

ಅಭ್ಯರ್ಥಿ ಎಚ್.ಬಿ. ಮುರಾರಿ ಮಾತನಾಡಿ, ಕ್ಷೇತ್ರದ ಜನರಿಗೆ ಉದ್ಯೋಗ ಅವಕಾಶ ಪಡೆಯಲು ಹಟ್ಟಿ ಚಿನ್ನದ ಗಣಿ ಕಂಪೆನಿ ಒಂದೇ ಇದೆ. ಇಲ್ಲಿ ನಿರುದ್ಯೋಗ ಯುವಕರು ಹೆಚ್ಚಿದ್ದಾರೆ. ತಾವು ಆಯ್ಕೆಯಾದರೆ ಉದ್ಯೋಗ ಅವಕಾಶಗಳು ಕಲ್ಪಿಸಿ ಕೊಡಲು ಹಟ್ಟಿ ಕಂಪೆನಿಯಿಂದ ಆರ್ಥಿಕ ಸಹಾಯ ಪಡೆದು ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸಲು ಹಾಗೂ ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚು ಆದ್ಯತೆ ನೀಡುವ ಭರವಸೆಯನ್ನು ಕೊಟ್ಟರು.
 
ಕಾರ್ಮಿಕ ಮುಖಂಡರಾದ ಅಮರಗುಂಡಪ್ಪ ನೆಲೋಗಿ, ರತ್ನ ಅಂಗಡಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.