ADVERTISEMENT

ಬೆಂಕಿಗೆ 18 ಬಣವೆಗಳು ಭಸ್ಮ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 12:44 IST
Last Updated 11 ಏಪ್ರಿಲ್ 2018, 12:44 IST
ಲಿಂಗಸುಗೂರು ತಾಲ್ಲೂಕು ಕಸಬಾಲಿಂಗಸುಗೂರು ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ಬಣವೆಗಳಿಗೆ ಬೆಂಕಿ ತಗುಲಿ ಉರಿಯುತ್ತಿರುವ ಚಿತ್ರಣ
ಲಿಂಗಸುಗೂರು ತಾಲ್ಲೂಕು ಕಸಬಾಲಿಂಗಸುಗೂರು ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ಬಣವೆಗಳಿಗೆ ಬೆಂಕಿ ತಗುಲಿ ಉರಿಯುತ್ತಿರುವ ಚಿತ್ರಣ   

ಲಿಂಗಸುಗೂರು: ತಾಲ್ಲೂಕಿನ ಕಸಬಾ ಲಿಂಗಸುಗೂರು ಗ್ರಾಮದಲ್ಲಿ ರೈತರ ಮೇವಿನ ಮತ್ತು ಹೊಟ್ಟಿನ 18 ಬಣವೆಗಳು ಸೋಮವಾರ ಬೆಂಕಿಗೆ ಆಹುತಿಯಾಗಿವೆ.

ರೈತ ಗೌಡಪ್ಪ ಕುಪ್ಪಣ್ಣ, ಅಮರೇಶ ಬಸಲಿಂಗಪ್ಪ, ಆದಪ್ಪ ಬಸಪ್ಪ, ನಾಗಪ್ಪ ಅಮರಪ್ಪ, ಅಮರೇಶ ದೊಡ್ಡಪ್ಪ, ಮಲ್ಲಯ್ಯ ಕುಪ್ಪಣ್ಣ, ಶರಣಮ್ಮ ಶರಣಪ್ಪ, ಬಸಪ್ಪ ಅಡಿವೆಪ್ಪ, ಶರಣಪ್ಪ ಶಿವಪ್ಪ ಎಂಬುವವರಿಗೆ ಈ ಬಣವೆಗಳು ಮತ್ತು ಕೃಷಿಪರಿಕರ ಸಾಮಗ್ರಿಗಳು ಸೇರಿವೆ ಎಂದು ಗುರುತಿಸಲಾಗಿದೆ.

ಸೋಮವಾರ ಮಧ್ಯರಾತ್ರಿ 2ಗಂಟೆಯಿಂದ ಮಂಗಳವಾರ ಮಧ್ಯಾಹ್ನ 12 ಗಂಟೆ ವರೆಗೆ ನಿರಂತರ 10ತಾಸುಗಳ ಕಾಲ ಅಗ್ನಿಶಾಮಕ ಠಾಣೆ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದರು.

ADVERTISEMENT

ರೈತ ಸಂಘದ ಮುಖಂಡರಾದ ಸಿದ್ದಲಿಂಗೇಶ್ವರಗೌಡ ಪಾಟೀಲ, ಲಿಂಗನಗೌಡ ಮಾತನಾಡಿ, ರೈತರು ಸಂಕಷ್ಟಕ್ಕೆ ಸಿಲುಕಿದರು ತಾಲ್ಲೂಕು ಆಡಳಿತ ಸೌಜನ್ಯತೆಗೂ ಭೇಟಿ ನೀಡಿಲ್ಲ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಜಿಲ್ಲಾಡಳಿತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.