ರಾಯಚೂರು: ಹಿಂದು ಧರ್ಮ ಪೂರ್ವಿಕರು ತಿಳಿಸಿರುವ ಮಾರ್ಗದರ್ಶನದಂತೆಯೇ ಶಾಸ್ತ್ರೋಕ್ತ ರೀತಿ ಯುಗಾದಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಪದಾಧಿಕಾರಿ ಸುವರ್ಣ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯ ನಾಮ ಸಂವತ್ಸರ ಆಗಮಿಸುತ್ತಿದೆ. ಹಿಂದು ಜನಜಾಗೃತಿ ಸಮಿತಿಯಿಂದ ನಗರದ ಪ್ರಮುಖ ರಸ್ತೆ, ದೇವಸ್ಥಾನ ಸ್ಥಳಗಳಲ್ಲಿ ಧರ್ಮಧ್ವಜ ವಿತರಿಸುವ ಕಾರ್ಯ ಮಾಡಲಾಗುತ್ತದೆ. ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಯುಗಾದಿ ಹಬ್ಬವನ್ನು ಸಾರ್ವತ್ರಿಕವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸಲು ಸಮಿತಿ ಸಿದ್ಧತೆ ಮಾಡಿಕೊಂಡಿದೆ. ಕರ ಪತ್ರ ಹಂಚಿಕೆ, ಭಿತ್ತಿ ಪತ್ರ ಅಂಟಿಸುವುದು, ಧರ್ಮಧ್ವಜ ಏರಿಸಿ ಯುಗಾದಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಹಿಂದು ಜನಜಾಗೃತಿ ಸಮಿತಿಯ ವಿಜಯಶ್ರೀ, ಜಯಶ್ರೀ, ಕೃಷ್ಣವೇಣಿ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.