ADVERTISEMENT

‘ಸಮಾಜದ ಒಳಿತಿಗಾಗಿ ಆಧ್ಯಾತ್ಮಿಕ ತಪೋವನ’

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 9:56 IST
Last Updated 31 ಮಾರ್ಚ್ 2018, 9:56 IST
ಶಕ್ತಿನಗರದ ಸಮೀಪದ ಕಾಡ್ಲೂರು ಗ್ರಾಮದಲ್ಲಿ ಬಸವ ಟಿವಿಯ ಸಂಸ್ಥಾಪಕ ಈ.ಕೃಷ್ಣಪ್ಪ ಅವರನ್ನು ಈಚೆಗೆ ಸನ್ಮಾನಿಸಲಾಯಿತು
ಶಕ್ತಿನಗರದ ಸಮೀಪದ ಕಾಡ್ಲೂರು ಗ್ರಾಮದಲ್ಲಿ ಬಸವ ಟಿವಿಯ ಸಂಸ್ಥಾಪಕ ಈ.ಕೃಷ್ಣಪ್ಪ ಅವರನ್ನು ಈಚೆಗೆ ಸನ್ಮಾನಿಸಲಾಯಿತು   

ಶಕ್ತಿನಗರ: ಸಮಾಜದ ಒಳಿತಿಗಾಗಿ ಆಧ್ಯಾತ್ಮಿಕ ತಪೋವನ ಕಾರ್ಯಕ್ರಮಗಳು ಅಗತ್ಯ ಎಂದು ಬಸವ ಟಿವಿಯ ಸಂಸ್ಥಾಪಕ ಈ.ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಸಮೀಪದ ಕಾಡ್ಲೂರು ಗ್ರಾಮದಲ್ಲಿ ಈಚೆಗೆ ನಡೆದ ಸದ್ಗುರು ನಿಜಾನಂದ ಶರಣರ ಆಧ್ಯಾತ್ಮಿಕ ತಪೋವನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಾನವ ಜೀವಿಯ ಪರಮ ಪುರುಷಾರ್ಥ ಮೋಕ್ಷ ಸಾಧನೆ. ತನ್ನನ್ನು ತಾನು ಅರಿತುಕೊಳ್ಳುವುದು, ತನ್ನ ಸ್ವರೂಪದ ದರ್ಶನವೇ ಮೋಕ್ಷ ಎಂಬ ತಾತ್ವಿಕ ವಿಚಾರಧಾರೆಗಳನ್ನು ಈ ನಾಡಿಗೆ ರವಾನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ADVERTISEMENT

ಪತ್ರಕರ್ತ ಬಸವರಾಜಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾಡ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ ಗುರ್ಜಾಪುರ, ಸದಸ್ಯ ಪಾಂಡುರಂಗ, ಶರಣರಾದ ಬಸವದೇವರು, ಬಸವರಾಜರಾಜಗುರು ಮಲದಕಲ್‌, ನಿಜಗುಣ ಶಿವಯೋಗಿ ನೀರಮಾನ್ವಿ, ಪಂಡಿತ ಜನಾರ್ದನ ಪಾಣಿಭಾತ್ರಿ ಸುರಪುರ, ಕಂದೂರಿನ ಸಿದ್ದಲಿಂಗ ಗುರುಗಳು, ಶಾಂತಾ ಕುಲಕರ್ಣಿ, ದೇವೇಂದ್ರಪ್ಪ ಕಾಕರಗಲ್, ಹನುಮಂತಪ್ಪ ಕಾಕರಗಲ್, ಜಂಬಣ್ಣ, ವಿಶ್ವನಾಥಗಡ್ಡಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.