ADVERTISEMENT

ಪ್ರವಾಹದಿಂದ 25 ಶಾಲಾಕೋಣೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 9:11 IST
Last Updated 5 ಅಕ್ಟೋಬರ್ 2019, 9:11 IST
ಡಿಡಿಪಿಐ ಬಿ.ಕೆ.ನಂದನೂರ
ಡಿಡಿಪಿಐ ಬಿ.ಕೆ.ನಂದನೂರ   

ರಾಯಚೂರು: ಜಿಲ್ಲೆಯಲ್ಲಿ ಕೃಷ್ಣಾನದಿ ಪ್ರವಾಹದಿಂದ ಲಿಂಗಸುಗೂರು ಹಾಗೂ ದೇವದುರ್ಗ ತಾಲ್ಲೂಕುಗಳ 13 ಸರ್ಕಾರಿ ಶಾಲೆಗಳ 25 ಕೋಣೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ನಂದನೂರ ಅವರು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

ಒಂಭತ್ತು ಕೋಣೆಗಳು ಪೂರ್ಣಪ್ರಮಾಣದಲ್ಲಿ ಹಾನಿಯಾಗಿವೆ. ಐದು ಕೋಣೆಗಳು ಭಾಗಶಃ ಹಾನಿಯಾಗಿವೆ ಹಾಗೂ 11 ಕೋಣೆಗಳು ಅಲ್ಪಸ್ವಲ್ಪ ಹಾನಿಯಾಗಿವೆ.

ಲಿಂಗಸುಗೂರು ತಾಲ್ಲೂಕಿನ ಕಡದರಗಡ್ಡಿ, ಯರಗೋಡಿ, ಯಳಗುಂದಿ, ಗುಂತಗೋಳ, ಗೋನವಾಟ್ಲಾ, ಹಂಚಿನಾಳ, ಜಲದುರ್ಗ, ರಾಯದುರ್ಗದ ಶಾಲಾ ಕೋಣೆಗಳಿಗೆ ಹಾನಿಯಾಗಿದೆ. ದೇವದುರ್ಗ ತಾಲ್ಲೂಕಿನ ಅಂಜಳ, ಹೇರುಂಡಿ, ಯಾಟಗಲ್‌, ಲಿಂಗದಳ್ಳಿ ಹಾಗೂ ಹಿರೇರಾಯನಕುಂಪಿಯ ಸರ್ಕಾರಿ ಶಾಲಾ ಕೋಣೆಗಳಿಗೆ ಹಾನಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.