ADVERTISEMENT

ಕಾರು–ಬೈಕ್‌ ಡಿಕ್ಕಿ: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 14:13 IST
Last Updated 1 ಜುಲೈ 2019, 14:13 IST
ರಾಯಚೂರು ನಗರದ ಹೊರವಲಯದ ಎಂಪಿಸಿಎಲ್‌ ಬಳಿ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಕಾರು
ರಾಯಚೂರು ನಗರದ ಹೊರವಲಯದ ಎಂಪಿಸಿಎಲ್‌ ಬಳಿ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಕಾರು   

ರಾಯಚೂರು:ನಗರದ ಹೊರವಲಯದ ಎಂಪಿಸಿಎಲ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಕಾರು–ಬೈಕ್‌ ಡಿಕ್ಕಿ ಉಂಟಾಗಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಜನರ ಪೈಕಿ ಇಬ್ಬರು ಗಾಯಗೊಂಡಿದ್ದಾರೆ.

ರಾಯಚೂರು ನಗರ ಸ್ಟೇಷನ್‌ ಏರಿಯಾ ನಿವಾಸಿ ಕಿಶನರಾವ್‌ ನಾಗೋಜಿರಾವ್‌ (40) ಮೃತಪಟ್ಟಿದ್ದು, ದೇವಸುಗೂರಿನ ನಿವಾಸಿಗಳಾದ ಸೂಗುರೇಶ ಮತ್ತು ಅನಂತ್‌ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT