ADVERTISEMENT

ಸಿಂಧನೂರು: ಬಿರುಕು ಬಿಟ್ಟ ಸಿಸಿ ರಸ್ತೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 13:57 IST
Last Updated 15 ಜೂನ್ 2023, 13:57 IST
ಸಿಂಧನೂರು ತಾಲ್ಲೂಕಿನ ಐದನೇ ಪುನರ್ವಸತಿ ಕ್ಯಾಂಪ್‌ಗೆ ಬುಧವಾರ ಭೇಟಿ ನೀಡಿದ್ದ ಯೋಜನಾ ನಿರ್ದೇಶಕ ಡಿ.ಚಂದ್ರಶೇಖರಯ್ಯ ಅವರ ನೇತೃತ್ವದ ತಂಡ ಬಿರುಕು ಬಿಟ್ಟ ಸಿಸಿ ರಸ್ತೆಯನ್ನು ಪರಿಶೀಲನೆ ನಡೆಸಿತು
ಸಿಂಧನೂರು ತಾಲ್ಲೂಕಿನ ಐದನೇ ಪುನರ್ವಸತಿ ಕ್ಯಾಂಪ್‌ಗೆ ಬುಧವಾರ ಭೇಟಿ ನೀಡಿದ್ದ ಯೋಜನಾ ನಿರ್ದೇಶಕ ಡಿ.ಚಂದ್ರಶೇಖರಯ್ಯ ಅವರ ನೇತೃತ್ವದ ತಂಡ ಬಿರುಕು ಬಿಟ್ಟ ಸಿಸಿ ರಸ್ತೆಯನ್ನು ಪರಿಶೀಲನೆ ನಡೆಸಿತು   

ಸಿಂಧನೂರು: ಇಲ್ಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಕೈಗೊಳ್ಳಲಾದ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆಗಾಗಿ ಬಂದಿರುವ ಯೋಜನಾ ಇಲಾಖೆಯ ಎಡಿಬಿ ವಿಭಾಗದ ನಿರ್ದೇಶಕ ಡಿ. ಚಂದ್ರಶೇಖರಯ್ಯ ನೇತೃತ್ವದ ತನಿಖಾಧಿಕಾರಿಗಳ ತಂಡ ಇಲ್ಲಿನ ಪುನರ್ವಸತಿ ಕ್ಯಾಂಪ್ (ಆರ್.ಎಚ್.ಕ್ಯಾಂಪ್)–5ಕ್ಕೆ ಭೇಟಿ ನೀಡಿತು.

ಆರ್.ಎಚ್. ಕ್ಯಾಂಪ್‍ ಐದರಲ್ಲಿ ಕಲ್ಯಾಣ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ನಿರ್ವಹಿಸಿದ ಸಿಸಿ ರಸ್ತೆ ಕಾಮಗಾರಿಯು ಬಿರುಕು ಬಿಟ್ಟಿರುವುದನ್ನು ತನಿಖಾ ತಂಡ ಪರಿಶೀಲನೆ ನಡೆಸಿತು. 

ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಡಿ.ಚಂದ್ರಶೇಖರಯ್ಯ ಅವರು, ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2018 ರಲ್ಲಿ ₹1.2 ಕೋಟಿ ಸಿಸಿ ರಸ್ತೆಗಾಗಿ ಮಂಜೂರು ಮಾಡಿ ಕಾಮಗಾರಿ ನಿರ್ವಹಿಸುವ ಜವಾಬ್ದಾರಿಯನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು. 2019 ರಲ್ಲಿ ₹ 82 ಲಕ್ಷ ಹಣ ಪಾವತಿಯಾಗಿದೆ. ಆದರೆ ರಸ್ತೆ ಗುಣಮಟ್ಟ ಮಾತ್ರ ತೃಪ್ತಿಕರವಾಗಿಲ್ಲ. ಇದರ ವಸ್ತು ಸ್ಥಿತಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ’ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.