ಮುದಗಲ್: ಸಮೀಪದ ಆಶಿಹಾಳ ತಾಂಡಾದಲ್ಲಿ ಮಂಗಳವಾರ ಗುಡ್ಡದ ದುರ್ಗಮ್ಮ ದೇವಿ ಜಾತ್ರೆ ಜರುಗಿತು.
ಸೋಮವಾರ ಸಂಜೆ ದುರ್ಗಾ ದೇವಿ ಮೂರ್ತಿಗೆ ಹೊಳೆ ಸ್ನಾನ ಮಾಡಿಸಿ ಪೂಜೆ ಮಾಡಲಾಯಿತು.
ರಾತ್ರಿ ಕಳಸಾರೋಹಣ ಕಾರ್ಯ ಕ್ರಮ ನಡೆಯಿತು. ಮಂಗ ಳವಾರ ಬೆಳಿಗ್ಗೆ ಗುಡ್ಡದಲ್ಲಿ ದೇವಿಯ ಪಲ್ಲಕ್ಕಿ ಉತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ವಿವಿಧ ಗ್ರಾಮಗಳಿಂದ ಜಾತ್ರೆಗೆ ಆಗಮಿಸಿದ ದೇವಿ ಭಕ್ತರು, ಭಕ್ತಿ ಹಾಡುಗಳನ್ನು ಹಾಡಿದರು. ಭಕ್ತರಿಂದ ದೇವಿಗೆ ಧೀರ್ಘದಂಡ ನಮಸ್ಕಾರ ಹಾಕಿದರು.
ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಜೆಡಿಎಸ್ ಮುಖಂಡ ಸಿದ್ದು ವೈ. ಬಂಡಿ, ಬಿಜೆಪಿ ಲಿಂಗಸುಗೂರು ಯುವ ಮೋರ್ಚದ ಅಧ್ಯಕ್ಷ ಈಶ್ವರ ವಜ್ಜಲ್, ಬೆಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕ್ನ ಮುಖ್ಯ ಪ್ರಬಂಧಕ ಪ್ರೇಮ್ಸಿಂಗ್, ನೇಮಿಚಂದ, ರಮೇಶ ನಾಯಕ, ದೇವಮ್ಮ ಶೇಟಪ್ಪ, ಶೇಟಪ್ಪ ಹಾಗೂ ಚಂದ್ರಶೇಖರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.