ADVERTISEMENT

ರಾಯಚೂರು | ಅಪಘಾತದಲ್ಲಿ ಬಾಲಕ ಸಾವು, ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 16:00 IST
Last Updated 14 ಏಪ್ರಿಲ್ 2024, 16:00 IST

ರಾಯಚೂರು: ರಾಯಚೂರು ನಗರದಿಂದ ಹೈದರಾಬಾದ್‍ಗೆ ಈರುಳ್ಳಿ ಸಾಗಿಸುತ್ತಿದ್ದ ಟಾಟಾಏಸ್‌ ಅಪಘಾತಕ್ಕೀಡಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಟಾಟಾ ಏಸ್ ವಾಹನದಲ್ಲಿ ಈರುಳ್ಳಿ ತೆಗೆದುಕೊಂಡು ಹೋಗುವಾಗ ರಾಷ್ಟ್ರೀಯ ಹೆದ್ದಾರಿ ಬಳಿಯ ರಸ್ತೆ ವಿಭಜಕ( ಡಿವೈಡರ್) ಗೆ ವಾಹನ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಗರದ ಬೇರೂನ್ ಕಿಲ್ಲಾ ಬಡಾವಣೆಯ ಬಾಲಕ ಸಮರ್ಥ (11) ಮೃತಪಟ್ಟಿದ್ದು, ವಾಹನ ಚಾಲಕನ ಕೈ ತುಂಡಾಗಿದೆ. ಅಂಬಾಜಿ ಎಂಬಾತನ ತಲೆಗೆ ಗಂಭೀರ ಗಾಯವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT