ADVERTISEMENT

ರಾಯಚೂರು | ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ: ಕೆಲವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 6:32 IST
Last Updated 6 ಫೆಬ್ರುವರಿ 2025, 6:32 IST
<div class="paragraphs"><p> ಪಲ್ಟಿಯಾದ&nbsp;ಬಸ್</p></div>

ಪಲ್ಟಿಯಾದ ಬಸ್

   

ಮುದಗಲ್: ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಹೊರವಲಯದಲ್ಲಿ ಗುರುವಾರ ಸರ್ಕಾರಿ ಬಸ್‌ನ ಎಕ್ಸಲ್‌ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಚಿಕ್ಕ ಲಕ್ಕಿಹಾಳದಿಂದ ಲಿಂಗಸುಗೂರು ಕಡೆ ಹೊರಟ ಬಸ್ ಮುದಗಲ್- ಲಿಂಗಸುಗೂರು ರಸ್ತೆಯಲ್ಲಿ ಕರಿಗಾರ ಹೊಲದ ಹತ್ತಿರ ಉರುಳಿಬಿದ್ದಿದೆ.

ADVERTISEMENT

ಘಟನೆಯಲ್ಲಿ 33 ಮಹಿಳೆಯರು, 6 ಜನ ಪುರುಷರು ಹಾಗೂ 30 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮುದಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.