ಪ್ರಜಾವಾಣಿ ವಾರ್ತೆ
ಮುದಗಲ್: ಪಟ್ಟಣದಲ್ಲಿ ಪುನೀತ್ ರಾಜ್ಕುಮಾರ್ ಅವರ ಫೋಟೊಗಳಿಗೆ ಬೇಡಿಕೆ ಹೆಚ್ಚಾಗಿದೆ.
ಪಟ್ಟಣ ಸುತ್ತಲಿನ ಗ್ರಾಮಗಳಲ್ಲಿ ಪುನೀತ್ ಸ್ಮರಣಾರ್ಥ ಅಭಿಮಾನಿಗಳು ಅವರ ಭಾವಚಿತ್ರಗಳಿಗೆ ಪುಷ್ಪಮಾಲೆ ಹಾಕಿ ಅಭಿಮಾನ ಮೆರೆದಿದ್ದಾರೆ. ಬಡವರಿಗೆ ಉಚಿತ ಆಹಾರ ವಿತರಿಸಿದ್ದಾರೆ. ಈಗ ಅಭಿಮಾನಿಗಳು ದೇವರ ಫೋಟೊಗಳ ಮಧ್ಯೆ
ಪುನೀತ್ ಫೋಟೊವನ್ನೂ ಇರಿಸಿ ಪೂಜಿಸುತ್ತಿದ್ದಾರೆ.
’ಪುನೀತ್ ಅವರ ಫೋಟೊ ಫ್ರೇಮ್ಗಳಿಗೆ ಆರ್ಡರ್ ಮಾಡುವುದು ಹೆಚ್ಚಾಗಿದೆ. ಈ ಫ್ರೇಮ್ಗಳನ್ನು ಸಂತಾಪ ಸಭೆ, ಸಮಾರಂಭಗಳು ಮತ್ತು ಇತ್ತೀಚೆಗೆ ನಡೆದ ರಾಜ್ಯೋತ್ಸವ ಆಚರಣೆಗಳಲ್ಲಿ ಬಳಸಲಾಗುತ್ತಿತ್ತು. ಸಾಮಾನ್ಯವಾಗಿ ದೇವರು ಮತ್ತು ದೇವತೆಗಳ ಫೋಟೊಗಳಿಗೆ ಹಾಕಲು ಬಳಸುವ ಫ್ರೇಮ್ಗಳನ್ನೇ ಇದೀಗ ಪುನೀತ್ ಅವರ ಫೋಟೊಗೆ ಹಾಕುವಂತೆ
ಜನರು ಕೇಳುತ್ತಿದ್ದಾರೆ’ ಎಂದು ಫೋಟೊ ಮಾರಾಟ ಮಾಡುತ್ತಿರುವ ಡಿಲಕ್ಸ್ ಸೂಪರ್ ಮಾರ್ಕೆಟ್ ಅಂಗಡಿಯ ಮಾಲೀಕ ಹಾಜಿ ಮಲಂಗ ಬಾಬಾ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.