ADVERTISEMENT

ಸಣ್ಣ ಉದ್ದಿಮೆದಾರರೊಂದಿಗೆ ಸಂವಾದ

​ಪ್ರಜಾವಾಣಿ ವಾರ್ತೆ
Published 24 ಮೇ 2019, 15:35 IST
Last Updated 24 ಮೇ 2019, 15:35 IST
ರಾಯಚೂರಿನ ಸಿಂಡಿಕೇಟ್‌ ಬ್ಯಾಂಕ್‌ ಮುಖ್ಯಶಾಖೆಯಲ್ಲಿ ಸಣ್ಣ ಉದ್ದಿಮೆದಾರರೊಂದಿಗೆ ಶುಕ್ರವಾರ ಸಂವಾದ ಆಯೋಜಿಸಲಾಗಿತ್ತು
ರಾಯಚೂರಿನ ಸಿಂಡಿಕೇಟ್‌ ಬ್ಯಾಂಕ್‌ ಮುಖ್ಯಶಾಖೆಯಲ್ಲಿ ಸಣ್ಣ ಉದ್ದಿಮೆದಾರರೊಂದಿಗೆ ಶುಕ್ರವಾರ ಸಂವಾದ ಆಯೋಜಿಸಲಾಗಿತ್ತು   

ರಾಯಚೂರು:ನಗರದ ಸಿಂಡಿಕೇಟ್‌ ಬ್ಯಾಂಕ್‌ ಮುಖ್ಯಶಾಖೆಯಲ್ಲಿ ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರೊಂದಿಗೆ ಶುಕ್ರವಾರ ಸಂವಾದಏರ್ಪಡಿಸಲಾಗಿತ್ತು.

ಉದ್ದಿಮೆದಾರರು ಬ್ಯಾಂಕ್‌ಗೆ ತಮ್ಮ ಬೇಡಿಕೆಗಳನ್ನು ಸಲ್ಲಿಸಬೇಕು. ಈ ಬೇಡಿಕೆಗಳ ಕುರಿತು ಚರ್ಚಿಸಿದ ಬಳಿಕ ಸಾಲ ಪಡೆದುಕೊಂಡು, ಮರುಪಾವತಿ ಮಾಡಬೇಕು ಎಂದು ಸಲಹೆ ನೀಡಲಾಯಿತು.

ಅತಿ ಕಡಿಮೆ ಬಡ್ಡಿದರದಲ್ಲಿ ಉದ್ದಿಮೆಗಳಿಗೆ ಸಾಲ ಸೌಲಭ್ಯ ದೊರೆಯುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. 27 ರಂದು ಸಾಲ ಮಂಜೂರಾತಿ ಬಗ್ಗೆ ಪರಿಶೀಲಿಸಿ ತಿಳಿಸಲಾಗುವುದು ಎಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದರು.

ADVERTISEMENT

ಶಿವರಾಜ ಸ್ವಾಗತಿಸಿದರು. ಬಾಳಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.