ADVERTISEMENT

ನೆಲಕೊಳ ಗ್ರಾಮದ ಸುತ್ತಮುತ್ತ ಜಿಂಕೆ, ಕಾಡುಹಂದಿಗಳ ಹಾವಳಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 12:24 IST
Last Updated 11 ಆಗಸ್ಟ್ 2021, 12:24 IST
ಕವಿತಾಳ ಸಮೀಪದ ನೆಲಕೊಳ ಗ್ರಾಮದಲ್ಲಿ ಜಿಂಕೆ ಹಾಗೂ ಕಾಡುಹಂದಿಗಳ ದಾಳಿಯಿಂದ ಬೆಳೆ ನಾಶವಾಗಿರುವುದು
ಕವಿತಾಳ ಸಮೀಪದ ನೆಲಕೊಳ ಗ್ರಾಮದಲ್ಲಿ ಜಿಂಕೆ ಹಾಗೂ ಕಾಡುಹಂದಿಗಳ ದಾಳಿಯಿಂದ ಬೆಳೆ ನಾಶವಾಗಿರುವುದು   

ನೆಲಕೊಳ (ಕವಿತಾಳ): ಮಸ್ಕಿ ತಾಲ್ಲೂಕಿನ ನೆಲಕೊಳ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಜಿಂಕೆ ಮತ್ತು ಕಾಡುಹಂದಿಗಳ ಹಾವಳಿ ಹೆಚ್ಚಿದ್ದು ಬೆಳೆ ನಾಶಪಡಿಸುತ್ತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಬೆಳಿಗ್ಗೆ ಹಾಗೂ ಸಾಯಂಕಾಲದ ಸಮಯದಲ್ಲಿ ಹಿಂಡು ಹಿಂಡಾಗಿ ದಾಳಿ ಮಾಡುತ್ತಿರುವ ಜಿಂಕೆಗಳು ಮತ್ತು ರಾತ್ರಿ ಹೊತ್ತಲ್ಲಿ ಜಮೀನುಗಳಿಗೆ ನುಗ್ಗುತ್ತಿರುವ ಕಾಡು ಹಂದಿಗಳು ಶೇಂಗಾ ಮತ್ತು ಸಜ್ಜೆ ಬೆಳೆಗಳನ್ನು ನಾಶಪಡಿಸುತ್ತಿವೆ. ಗ್ರಾಮದ ಸುತ್ತಮುತ್ತ ಗುಡ್ಡಗಳಿದ್ದು ಅದರ ವ್ಯಾಪ್ತಿಯಲ್ಲಿನ ಹೊಲಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿದೆ. ಬೆಳೆಗಳ ರಕ್ಷಣೆಗೆ ಜಮೀನು ಸುತ್ತಮುತ್ತ ಮುಳ್ಳು ಬೇಲಿ ಮತ್ತಿತರ ಕ್ರಮ ಕೈಗೊಂಡರೂ ಕಾಡು ಪ್ರಾಣಿಗಳ ಹಾವಳಿ ತಡೆಯಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಮಹ್ಮದ್‍ ಜಾಫರ್ ಮತ್ತು ಮುದಿಯಪ್ಪ ಜಮೀನದಾರ್ ಹೇಳಿದರು.

‘ಬೆಳೆಗಳನ್ನು ತಿನ್ನುವುದರ ಜತೆಗೆ ಕಾಡು ಹಂದಿಗಳು ಹೊಲದಲ್ಲಿ ಉರುಳಾಡಿ ಬೆಳೆಗಳನ್ನು ನಾಶಪಡಿಸುತ್ತಿವೆ, ಬೆಳೆಗ್ಗೆಯಿಂದ ಸಂಜೆಯ ವರೆಗೆ ರೈತರು ಹೊಲದಲ್ಲಿ ಕೆಲಸ ಮಾಡುವುದರಿಂದ ಪ್ರಾಣಿಗಳ ದಾಳಿಯನ್ನು ತಡೆಯಬಹುದು, ರಾತ್ರಿ ಸಮಯದಲ್ಲಿ ಕಾಡು ಹಂದಿಗಳ ಹಾವಳಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಕತ್ತಲಲ್ಲಿ ಮನುಷ್ಯರ ಮೇಲೆ ದಾಳಿ ಮಾಡುವ ಭಯದಿಂದ ಹೊಲಗಳಿಗೆ ಹೋಗಲು ಹಿಂದೇಟು ಹಾಕುವಂತಾಗಿದೆ’ ಎಂದು ರೈತ ಮಲ್ಲಪ್ಪ ನೆಲಕೊಳ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.