ADVERTISEMENT

ರಾಯಚೂರು: ಪ್ರವಾಹ: ಸೇತುವೆ, ರಸ್ತೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:15 IST
Last Updated 16 ಆಗಸ್ಟ್ 2019, 20:15 IST
ಕೃಷ್ಣಾನದಿ ಪ್ರವಾಹದಿಂದ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗೂಗಲ್‌ ಗ್ರಾಮದ ಬ್ರಿಡ್ಜ್‌ ಕಂ ಬ್ಯಾರೇಜ್‌ ಸಂಪರ್ಕ ರಸ್ತೆಯು ಕೊಚ್ಚಿಹೋಗಿದೆ
ಕೃಷ್ಣಾನದಿ ಪ್ರವಾಹದಿಂದ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗೂಗಲ್‌ ಗ್ರಾಮದ ಬ್ರಿಡ್ಜ್‌ ಕಂ ಬ್ಯಾರೇಜ್‌ ಸಂಪರ್ಕ ರಸ್ತೆಯು ಕೊಚ್ಚಿಹೋಗಿದೆ   

ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 5 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಮುಳುಗಿರುವ ಸೇತುವೆಗಳು ಇನ್ನೂ ಸಂಪರ್ಕಕ್ಕೆ ತೆರೆದುಕೊಂಡಿಲ್ಲ.

ರಾಯಚೂರು–ಕಲಬುರ್ಗಿ ಮಾರ್ಗದಲ್ಲಿರುವ ದೇವದುರ್ಗ ತಾಲ್ಲೂಕಿನ ಹೂವಿನಹೆಡ್ಗಿ ಸೇತುವೆ ಇನ್ನೂ ಜಲಾವೃತವಾಗಿದೆ. ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆಗಳಿಗೆ ಸಂಪ ರ್ಕಿಸುವ ಜಲದುರ್ಗ ಸೇತುವೆ ಮತ್ತು ಯರಗೋಡಿ ಸೇತುವೆ ಮೇಲಿನ ನೀರು ತೆರವಾಗಿದೆ. ಆದರೆ, ಜಲದುರ್ಗ ಸೇತುವೆ ಹಾಳಾಗಿದ್ದು, ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಮರಳಿದ ಗ್ರಾಮಸ್ಥರು: ಸ್ಥಳಾಂತರಿಸಲಾಗಿದ್ದ ನದಿ ತೀರದ 23 ಗ್ರಾಮಗಳ ಜನರು ಮನೆಗಳತ್ತ ಮರಳುತ್ತಿದ್ದಾರೆ.

ADVERTISEMENT

ಸಂಪೂರ್ಣ ಸ್ಥಳಾಂತರಿಸಿರುವ 13 ಗ್ರಾಮಗಳ ಜನರು ಇನ್ನೂ ಪರಿಹಾರ ಕೇಂದ್ರಗಳಲ್ಲಿ ಉಳಿದಿದ್ದು, ಜಿಲ್ಲಾಡಳಿತದಿಂದ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.

ಕೊಪ್ಪಳ ವರದಿ: ತುಂಗಭದ್ರಾ ಜಲಾಶಯದಿಂದ 1.50 ಲಕ್ಷ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. ಪ್ರವಾಹದಿಂದ ಚಿಕ್ಕಜಂತಕಲ್-ಕಂಪ್ಲಿ ಸೇತುವೆ ಮೇಲಿನ ರಸ್ತೆ ಕಿತ್ತು ಹೋಗಿದ್ದರಿಂದ ಸಂಚಾರ ಬಂದ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.