ADVERTISEMENT

ಪತ್ರಿಕಾ ವಿತರಕರಿಗೆ ಆಹಾರಧಾನ್ಯ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಮೇ 2020, 14:52 IST
Last Updated 1 ಮೇ 2020, 14:52 IST
ರಾಯಚೂರಿನಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ ಅವರು ಎನ್‌.ಎಸ್‌.ಬೋಸರಾಜು ಫೌಂಡೇಷನ್‌ ಪರವಾಗಿ ಪತ್ರಿಕಾ ವಿತರಕರಿಗೆ ಶುಕ್ರವಾರ ಆಹಾರಧಾನ್ಯಗಳ ಕಿಟ್‌ಗಳನ್ನು ವಿತರಿಸಿದರು
ರಾಯಚೂರಿನಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ ಅವರು ಎನ್‌.ಎಸ್‌.ಬೋಸರಾಜು ಫೌಂಡೇಷನ್‌ ಪರವಾಗಿ ಪತ್ರಿಕಾ ವಿತರಕರಿಗೆ ಶುಕ್ರವಾರ ಆಹಾರಧಾನ್ಯಗಳ ಕಿಟ್‌ಗಳನ್ನು ವಿತರಿಸಿದರು   

ರಾಯಚೂರು:ನಗರದಲ್ಲಿ ದಿನಪತ್ರಿಕೆಗಳನ್ನು ವಿತರಿಸುವವರಿಗೆ ಎನ್‌.ಎಸ್‌.ಬೋಸರಾಜು ಪೌಂಢೇಷನ್‌ನಿಂದ ಶುಕ್ರವಾರ ಆಹಾರಧಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ ಕಿಟ್‌ಗಳನ್ನು ವಿತರಿಸಿದರು. ಆನಂತರ ಮಾತನಾಡಿದ ಅವರು, ಲಾಕ್‌ಡೌನ್‌ನಿಂದಾಗಿ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ಮನೆಮನೆಗೂ ಪತ್ರಿಕೆಗಳನ್ನು ತಲುಪಿಸುವ ಕೆಲಸ ಶ್ಲಾಘನೀಯ. ಪೌಂಡೇಷನ್‌ ಮೂಲಕ ಇಂಥವರಿಗೆ ನೆರವು ಒದಗಿಸುವುದರಿಂದ ಅನುಕೂಲವಾಗಲಿದೆ ಎಂದರು.

130 ಕ್ಕೂ ಹೆಚ್ಚು ವಿತರಕರು ಕಿಟ್‌ಗಳನ್ನು ಪಡೆದುಕೊಂಡರು.

ADVERTISEMENT

ನಗರಸಭೆ ಸದಸ್ಯರಾದ ಜಯಣ್ಣ, ಸಾಜೀದ್‌ ಸಮೀರ, ಮೊಹ್ಮದ್‌ ಶಾಲಂ, ಬಿ.ರಮೇಶ, ಅಸ್ಲಂ ಪಾಷಾ, ಮುಖಂಡರಾದ ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಅಬ್ದುಲ್‌ ಕರೀಂ, ರುದ್ರಪ್ಪ ಅಂಗಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ನಾಗಡದಿನ್ನಿ, ಪ್ರಧಾನ ಕಾರ್ಯದರ್ಶಿ ಆರ್‌.ಗುರುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.