ADVERTISEMENT

ಭಕ್ತಿಭಾವದಿಂದ ಹನುಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:57 IST
Last Updated 12 ಏಪ್ರಿಲ್ 2025, 15:57 IST
ರಾಯಚೂರಿನ ಹನುಮಾನ ಟಾಕೀಸ್ ರಸ್ತೆಯ ವೈಕುಂಠ ವೀರಹನುಮಾನ್ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ನೇರವೇರಿತು
ರಾಯಚೂರಿನ ಹನುಮಾನ ಟಾಕೀಸ್ ರಸ್ತೆಯ ವೈಕುಂಠ ವೀರಹನುಮಾನ್ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ನೇರವೇರಿತು    

ಪ್ರಜಾವಾಣಿ ವಾರ್ತೆ

ರಾಯಚೂರು: ಜಿಲ್ಲೆಯಾದ್ಯಂತ ಹನುಮ ಜಯಂತಿಯನ್ನು ಶನಿವಾರ ಭಕ್ತಿಭಾವದಿಂದ ಆಚರಿಸಲಾಯಿತು.

ಎಲ್ಲ ಹನುಮ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕೆಲವು ಕಡೆ ವೇದಿಕೆ ಕಾರ್ಯಕ್ರಮ, ಅನ್ನಪ್ರಸಾದ, ಕೇಸರಿ ಬಾವುಟಗಳ ಸಹಿತ ಹನುಮನ ಭಾವಚಿತ್ರ ಮೆರವಣಿಗೆ, ರಥೋತ್ಸವ ಹಾಗೂ ತೊಟ್ಟಿಲೋತ್ಸವ ಮಾಡಲಾಯಿತು.

ADVERTISEMENT

ಗಾಂಧಿ ವೃತ್ತದ ಹನುಮಾನ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿದವು. ಸುತ್ತಮುತ್ತಲಿನ ಬಡಾವಣೆಗಳಿಂದ ಭಕ್ತರು ಭಾಗವಹಿಸಿದ್ದರು.

ನಗರದ ವಿವಿಧ ಬಡಾವಣೆಗಳಲ್ಲಿರುವ ಹನುಮಾನ ದೇವಸ್ಥಾನಗಳಲ್ಲಿ ದಿನಪೂರ್ತಿ ಭಕ್ತರು ದರ್ಶನಕ್ಕಾಗಿ ಬರುತ್ತಿರುವುದು ಸಾಮಾನ್ಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.