ADVERTISEMENT

ರಾಯಚೂರು: ಹಾಸನ-ಸೋಲ್ಲಾಪುರ ರೈಲು ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 5:38 IST
Last Updated 14 ಡಿಸೆಂಬರ್ 2021, 5:38 IST
ರಾಯಚೂರು: ಹಾಸನ-ಸೋಲ್ಲಾಪುರ ರೈಲು ಪ್ರಯಾಣಿಕರ ಪರದಾಟ
ರಾಯಚೂರು: ಹಾಸನ-ಸೋಲ್ಲಾಪುರ ರೈಲು ಪ್ರಯಾಣಿಕರ ಪರದಾಟ   

ರಾಯಚೂರು: ಹಾಸನ-ಸೋಲ್ಲಾಪುರ ರೈಲಿನ ಮೂಲಕ ಕಲಬುರ್ಗಿ, ಯಾದಗಿರಿ ಹಾಗೂ ಸೋಲ್ಲಾಪುರಕ್ಕೆ ತೆರಳುತ್ತಿದ್ದ ಪ್ರಯಾಣಿಕರು ರಾಯಚೂರು ನಿಲ್ದಾಣದಲ್ಲೇ ಪರದಾಡುವಂತಾಗಿದೆ.

ಎಇ ಹುದ್ದೆಯ ಪರೀಕ್ಷೆ ತಪ್ಪಿಸಿಕೊಂಡವರು ಬೆಳಿಗ್ಗೆ 8.45 ರಿಂದ ರಾಯಚೂರಿನಲ್ಲೇ ರೈಲು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

'ರೈಲ್ವೆ ಬಿಡುತ್ತಾರೆ ಎಂದು ಕಾದು ಕುಳಿತು ಎರಡು ತಾಸು ಆಯಿತು. ಆಗಲೇ ಯಾದಗಿರಿ ತಲುಪಬೇಕಿತ್ತು. ಏನು ಮಾಡಬೇಕು ಗೊತ್ತಾಗುತ್ತಿಲ್ಲ' ಎಂದು ಬೆಂಗಳೂರಿನಿಂದ ಯಾದಗಿರಿಗೆ ತೆರಳಬೇಕಿರುವ ಹನುಮಂತ ತಮ್ಮ ಪರದಾಟ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.