ಪ್ರಜಾವಾಣಿ ವಾರ್ತೆ
ಮಸ್ಕಿ: ಯಾದಗಿರಿ ಜಿಲ್ಲೆಯ ಶಹಪೂರದ ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿರುವ ಅಂಗವಿಕಲ ರವಿಕುಮಾರ ಅವರು ಬೆಂಗಳೂರಿನಲ್ಲಿನ ಪುನೀತ್ ಸಮಾಧಿವರೆಗೆ ಪಾದಯಾತ್ರೆ ಕೈಗೊಂಡಿದ್ದು, ಭಾನುವಾರ ಮಸ್ಕಿ ಪಟ್ಟಣಕ್ಕೆ ಆಗಮಿಸಿದರು.
ಪಟ್ಟಣದ ಹಳೆಯ ಬಸ್ ನಿಲ್ದಾಣದಲ್ಲಿ ಪ್ರತಾಪಗೌಡ ಪಾಟೀಲ್ ಪೌಂಡೇಶನ್ ಅಧ್ಯಕ್ಷ ಪ್ರಸನ್ನ ಪಾಟೀಲ್ ಪಾದಯಾತ್ರೆ ಕೈಗೊಂಡ ಯವಕನನ್ನು ಸನ್ಮಾನಿಸಿ ಬಿಳ್ಕೋಟ್ಟರು.
ಪುರಸಭೆ ಸದಸ್ಯರಾದರವಿಕುಮಾರ ಪಾಟೀಲ್, ಚೇತನ ಪಾಟೀಲ್, ಶರಣಯ್ಯ ಸೊಪ್ಪಿಮಠ, ಮಲ್ಲಿಕಾರ್ಜುನ ಬ್ಯಾಳಿ,, ಡಾ. ಸಂತೋಷ, ಪೌಂಡೇಶನ್ ಕಾರ್ಯದರ್ಶಿ ಮೌನೇಶ ನಾಯಕ, ದುರ್ಗಪ್ರಸಾದಮ ಶಿವರಾಜ ಹರಸೂರು, ಮಲ್ಲಿಕಾರ್ಜುನ ಬೈಲಗುಡ್ಡ, ಅಮರಯ್ಯ ಸೊಪ್ಪಿಮಠ, ಶರಣಗೌಡ ಸೇರಿದಂತೆ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.