ADVERTISEMENT

ರಾಯಚೂರು: ಪತಿ ನಿಷ್ಕಾಳಜಿ ಪತ್ನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 6:36 IST
Last Updated 18 ಫೆಬ್ರುವರಿ 2021, 6:36 IST
ಆತ್ಮಹತ್ಯೆ ಮಾಡಿಕೊಂಡ ವೀಣಾ ಶರಣಬಸವ
ಆತ್ಮಹತ್ಯೆ ಮಾಡಿಕೊಂಡ ವೀಣಾ ಶರಣಬಸವ    

ರಾಯಚೂರು: 'ಪತಿ ಖುಷಿ ಅನ್ನೊದೆ ಕೊಡಲೇ ಇಲ್ಲ, ಯಾವಾಗಲೂ ಕಾಯೋದೇ ಆಯ್ತು' ಎಂದು ಪತಿಯ ನಿಷ್ಕಾಳಜಿ ಬಗ್ಗೆ ಡೆತ್ ನೋಟ್ ಬರೆದಿಟ್ಟು ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಜಿಲ್ಲೆಯ ಸಿಂಧನೂರು ನಗರದ ಶರಣಬಸವೇಶ್ವರ ಕಾಲೋನಿಯಲ್ಲಿ ನಡೆದಿದೆ.

ವೀಣಾ ಶರಣಬಸವ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಒಂದು ಮಗು ಇದೆ.

'ನನ್ನ ಸಾವಿಗೆ ನಾನೇ ಕಾರಣ' ಎಂದು ಬರೆದಿದ್ದು, ಪೊಲೀಸರಿಗೆ ದೂರು ಕೊಡಬೇಡಿ, ಮಗುವನ್ನು ‌ಚೆನ್ನಾಗಿ ನೋಡಿಕೊಳ್ಳಿ ಎಂದು ವೀಣಾ ಅವರು ಬರೆದಿದ್ದಾರೆ. ಸಿಂಧನೂರು ನಗರ ಠಾಣೆ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.