ADVERTISEMENT

ಜಾಲಹಳ್ಳಿ | ‘ವಿಮೆ ಯೋಜನೆಗಳಡಿ ನೋಂದಾಯಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 15:29 IST
Last Updated 30 ಏಪ್ರಿಲ್ 2025, 15:29 IST
ಜಾಲಹಳ್ಳಿ ಸಮೀಪದ ಗಲಗ ಗ್ರಾಮದಲ್ಲಿ‌ ಈಚೆಗೆ ಅಪಘಾತದಲ್ಲಿ ಮೃತಪಟ್ಟ ಪಾಲಿಸಿದಾರನ ಪತ್ನಿಗೆ ಚೆಕ್ ನೀಡಲಾಯಿತು
ಜಾಲಹಳ್ಳಿ ಸಮೀಪದ ಗಲಗ ಗ್ರಾಮದಲ್ಲಿ‌ ಈಚೆಗೆ ಅಪಘಾತದಲ್ಲಿ ಮೃತಪಟ್ಟ ಪಾಲಿಸಿದಾರನ ಪತ್ನಿಗೆ ಚೆಕ್ ನೀಡಲಾಯಿತು   

ಜಾಲಹಳ್ಳಿ: ‘ಬಡವರು, ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಮೂರು ಜೀವ ವಿಮಾ ಯೋಜನೆಗಳನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಎನ್‌.ಮಧುಸೂದನ ಹೇಳಿದರು.

ಸಮೀಪದ ಗಲಗ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಚೇರಿಯಲ್ಲಿ ವಿಮಾ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಕಾರ್ಮಿಕರ ಅಪಘಾತ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಯಡಿ ನೋಂದಾಯಿಸಿಕೊಂಡವರು ಅಪಘಾತ ವಿಮೆ ಪಡೆಯಬಹುದು’ ಎಂದು ಹೇಳಿದರು.

ADVERTISEMENT

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದ ಹನುಮಂತರಾಯ ಅವರು ಅಪಘಾತದಲ್ಲಿ ಮೃತಪಟ್ಟ ಕಾರಣ ಅವರ ಪತ್ನಿ ಅಕ್ಕನಾಗಮ್ಮ ಅವರಿಗೆ ₹2 ಲಕ್ಷ ಚೆಕ್ ವಿತರಿಸಿದರು.

ಬ್ಯಾಂಕ್ ಅಧಿಕಾರಿಗಳಾದ ರವಿಕುಮಾರ, ಇಮ್ರಾನ್, ವೀರೇಂದ್ರ, ಬ್ಯಾಂಕ್ ಮಿತ್ರರಾದ ಮುದಕಪ್ಪ, ಸಿದ್ದಲಿಂಗಪ್ಪ, ಹನುಮಗೌಡ, ಗ್ರಾಮಸ್ಥರಾದ ಮಲ್ಲೇಶ, ಶಶಿಕುಮಾರ ಸ್ವಾಮಿ ಗಲಗ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.