ADVERTISEMENT

ಬಿಜೆಪಿ ವಿರುದ್ಧ ಮತ ಚಲಾಯಿಸಿ: ಮಾನ್ಸಯ್ಯ

5 (ಎ) ಕಾಲುವೆ ಯೋಜನೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 12:55 IST
Last Updated 11 ಏಪ್ರಿಲ್ 2021, 12:55 IST
ಮಸ್ಕಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಂತೆ 5 (ಎ) ಕಾಲುವೆ ಹೋರಾಟ ಸಮನ್ವಯ ಸಮಿತಿ ಸಂಚಾಲಕ ಆರ್. ಮಾನಸಯ್ಯ ಅವರು ಮಾರಲದಿನ್ನಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು
ಮಸ್ಕಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಂತೆ 5 (ಎ) ಕಾಲುವೆ ಹೋರಾಟ ಸಮನ್ವಯ ಸಮಿತಿ ಸಂಚಾಲಕ ಆರ್. ಮಾನಸಯ್ಯ ಅವರು ಮಾರಲದಿನ್ನಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು   

ಮಸ್ಕಿ: ಸತತ 12 ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಸಹ ನಾರಾಯಣಪೂರ ಬಲದಂಡೆಯ 5 (ಎ) ಕಾಲುವೆ ಯೋಜನೆಯನ್ನು ಜಾರಿಗೊಳಿಸುವಲ್ಲಿ ವಿಫಲರಾದ ಪ್ರತಾಪಗೌಡ ಪಾಟೀಲ ಅವರ ವಿರುದ್ಧ ಮತ ಹಾಕುವ ಮೂಲಕ ಬಿಜೆಪಿಯನ್ನು ಸೋಲಿಸಬೇಕು ಎಂದು 5 (ಎ) ಹೋರಾಟ ಸಮನ್ವಯ ಸಮಿತಿ ಸಂಚಾಲಕ ಆರ್.ಮಾನಸಯ್ಯ ಕರೆ ನೀಡಿದರು.

ಕ್ಷೇತ್ರದ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಭಾನುವಾರ ಜನಾಂದೋಲನ ಸಭೆಯಲ್ಲಿ ಮಾತನಾಡಿ, ರೈತ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು. ಕಾಲುವೆಯನ್ನು ಜಾರಿಮಾಡದ ಬಿಜೆಪಿಯ ಪ್ರತಾಪಪಾಟೀಲ ಅವರನ್ನು ಸೋಲಿಸಿ, ರೈತರ ಹೋರಾಟವನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಕಾಟಗಲ್, ಮಾರಲದಿನ್ನಿ, ದಿನ್ನೆಬಾಯಿ, ಬೆಲ್ಲದಮರಡಿ ಸೇರಿದಂತೆ ಇತರೆ 5A ಕಾಲುವೆ ವ್ಯಾಪ್ತಿಯಲ್ಲಿ ಜನಾಂದೋಲನ ಸಭೆಗಳನ್ನು ನಡೆಸಲಾಯಿತು. ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಜಾಗೃತಿ ಮೂಡಿಸಲಾಯಿತು.

ADVERTISEMENT

ರೈತ ಮುಖಂಡ ರಮಜಾನ್ ಸಾಬ ಉಳ್ಳಾಗಡ್ಡಿ, ಸಂತೋಷ ದಿನ್ನಿ, ತಿಪ್ಪಣ್ಣ ಹೆಸರೂರ, ಶಾಂತಮೂರ್ತಿ ಸ್ವಾಮಿ, ಅಮೀನಗಡ, ನಾಗಪ್ಪ ತಳವಾರ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.