ADVERTISEMENT

ಶಾಸಕಿ ನಿಂದನೆ ಪ್ರಕರಣ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 15:54 IST
Last Updated 6 ಜೂನ್ 2023, 15:54 IST

ದೇವದುರ್ಗ: ಶಾಸಕಿ ಕರೇಮ್ಮ.ಜಿ ನಾಯಕ ಅವರನ್ನು ನಿಂದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದ ಎಂಟು ಜನರ ಪೈಕಿ ಆಲದಮರ ತಾಂಡದ ನಿವಾಸಿ ಭದ್ರಪ್ಪ ಅವರನ್ನು ಸೋಮವಾರ ತಡರಾತ್ರಿ ಬಂಧಿಸಲಾಗಿದೆ.

ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಲಿಂಗಸುಗೂರು ಡಿವೈಎಸ್‌ಪಿ ಮಂಜುನಾಥ ನಾಯಕ ಮಂಗಳವಾರ ದೇವದುರ್ಗಕ್ಕೆ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಪಡೆದರು.

ನಂತರ ಶಾಸಕಿ ಕರೇಮ್ಮ. ಜಿ ನಾಯಕ ಅವರ ಮನೆಗೆ ಭೇಟಿ ನೀಡಿ ನಡೆದಿರುವ ಘಟನೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದು 8 ಜನರನ್ನು ಬಂಧಿಸುವ ಭರವಸೆ ನೀಡಿದರು. 

ADVERTISEMENT

’ನಿಮಗೆ ಸಂಪೂರ್ಣ ಭದ್ರತೆ ನೀಡುತ್ತೇವೆ’ ಎಂದು ತಿಳಿಸಿದ್ದಾರೆ ಎಂದು ಶಾಸಕಿ ಕರೇಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.