ರಾಯಚೂರು: ಇಲ್ಲಿನ ವಾಸವಿ ನಗರ ಮಾರ್ಗದಲ್ಲಿ ವಾಸವಿ ವೃತ್ತ ನಿರ್ಮಾಣಕ್ಕೆ ಶಾಸಕ ಡಾ.ಶಿವರಾಜ ಪಾಟೀಲ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಆನಂತರ ಮಾತನಾಡಿದ ಅವರು, ವೃತ್ತ ನಿರ್ಮಾಣ ಮಾಡಬೇಕು ಎನ್ನುವುದು ಆರ್ಯವೈಶ್ಯ ಸಮಾಜದ ಬಹುದಿನಗಳ ಬೇಡಿಕೆಯಾಗಿತ್ತು. ₹23 ಲಕ್ಷ ವೆಚ್ಚದಲ್ಲಿ ವೃತ್ತ ನಿರ್ಮಾಣವಾಗಲಿದೆ. ವಿನ್ಯಾಸದಲ್ಲಿ ತೋರಿಸಿದ ರೀತಿಯಲ್ಲಿಯೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದರು.
ಮಾದರಿ ವೃತ್ತ ನಿರ್ಮಾಣವಾಗಬೇಕು. ಅನುದಾನ ಅಗತ್ಯಬಿದ್ದರೆ ಮತ್ತೆ ₹10 ಲಕ್ಷ ಒದಗಿಸಲಾಗುವುದು. ವಾಸವಿ ನಗರ ಮಾರ್ಗದ ರಸ್ತೆಗಳ ನಿರ್ಮಾಣಕ್ಕೂ ಒತ್ತು ನೀಡಲಾಗುವುದು ಎಂದರು.
ಸಂಸದ ರಾಜಾ ಅಮರೇಶ್ವರ ನಾಯಕ, ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ, ಸೇಲ್ ನಿರ್ದೇಶಕ ಎನ್.ಶಂಕ್ರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಮಾನಂದ ಯಾದವ್, ಆರ್ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮುಕ್ತಿಯಾರ್, ನಗರಸಭೆ ಸದಸ್ಯ ಇ.ಶಶಿರಾಜ, ನಗರ ಬಿಜೆಪಿ ಅಧ್ಯಕ್ಷ ಬಿ.ಗೋವಿಂದ ಮುಖಂಡರಾದ ಎ.ಪಾಪಾರೆಡ್ಡಿ, ರವೀಂದ್ರ ಜಲ್ದಾರ್, ಯು.ದೊಡ್ಡಮಲ್ಲೇಶಪ್ಪ. ಎನ್.ಶ್ರೀನಿವಾಸರೆಡ್ಡಿ, ಆರ್ಯವೈಶ್ಯ ಸಮಾಜದ ಮುಖಂಡರಾದ ಕೊಂಡಾ ಕೃಷ್ಣಮೂರ್ತಿ, ಕುಂಟ್ನಾಳ ವೆಂಕಟೇಶ, ಸಾವಿತ್ರಿ ಪುರುಷೋತ್ತಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.